ADVERTISEMENT

ಶ್ರೀಲಂಕಾ: 11 ಭಾರತೀಯ ಮೀನುಗಾರರ ಬಂಧನ

ಪಿಟಿಐ
Published 8 ಫೆಬ್ರುವರಿ 2022, 11:33 IST
Last Updated 8 ಫೆಬ್ರುವರಿ 2022, 11:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ: ಶ್ರೀಲಂಕಾದ ವಿದೇಶಾಂಗ ಸಚಿವರು ಭಾರತಪ್ರವಾಸದಲ್ಲಿ ಇರುವಾಗಲೇ ಶ್ರೀಲಂಕಾದನೌಕಾಪಡೆ 11 ಭಾರತೀಯ ಮೀನುಗಾರರನ್ನು ದೇಶದ ಉತ್ತರ ಭಾಗದ ಡೆಲಫ್ಟ್‌ ದ್ವೀಪದ ಸಮೀಪ ಬಂಧಿಸಿದೆ.

ಭಾರತದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಜಿ.ಎಲ್‌.ಪೇರಿಸ್‌ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಅವರ ನಡುವೆ ಸೋಮವಾರ ನಡೆದ ಮಾತುಕತೆಯಲ್ಲಿ ಮೀನುಗಾರರ ವಿಚಾರವೂ ಪ್ರಮುಖ ಚರ್ಚೆಯಾಗಿತ್ತು. ಮೀನುಗಾರರ ಸಮಸ್ಯೆಗಳ ವಿಚಾರ ವಿನಿಮಯ ನಡೆಸಿ, ದ್ವಿಪಕ್ಷೀಯ ಕಾರ್ಯಾವಿಧಾನಗಳನ್ನು ಮುಂಚಿತವಾಗಿ ತಿಳಿಸುವ ಬಗ್ಗೆ ಎರಡೂ ಕಡೆಯಿಂದಲೂ ಒಪ್ಪಿಕೊಳ್ಳಲಾಗಿದೆ ಎಂದು ಜೈಶಂಕರ್‌ ಹೇಳಿದ್ದರು.ಇದೇ ಸಂದರ್ಭದಲ್ಲೇಭಾರತೀಯ ಮೀನುಗಾರರ ಬಂಧನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT