ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ನಟ ಅನಂತನಾಗ್ ಅವರ, ‘ನಾನು ಪಕ್ಕಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಕ್ತ’ ಎಂಬ ಹೇಳಿಕೆಯು ತಮಗೆ ಆಘಾತವನ್ನು ಉಂಟುಮಾಡಿತು ಎಂದು ಸೋಮು ಎಸ್. ಘಟ್ಟ ಅವರು ತಿಳಿಸಿದ್ದಾರೆ (ವಾ.ವಾ., ನ. 21). ಕನ್ನಡಿಗರೆಲ್ಲರೂ ಹೆಮ್ಮೆಪಡುವ ನಟ ಅನಂತನಾಗ್ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅವರಲ್ಲಿ ಸೋಮು ಅವರು ರಾಜಕೀಯ ವಿಮರ್ಶಕರನ್ನೋ ಸಾಮಾಜಿಕ ಚಿಂತಕರನ್ನೋ ಹುಡುಕ ಹೊರಟಿದ್ದರಿಂದ ಹಾಗೆ ಆಗಿರಬಹುದು. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಇವರನ್ನು ಬುದ್ಧಿಜೀವಿ ನಟ ಎಂದು ಭಾವಿಸಿರುವುದು ಸಹ ಸೋಮು ಅವರ ಮೇಲೆ ಪ್ರಭಾವ ಬೀರಿರಬಹುದು. ಸಾಮಾನ್ಯವಾಗಿ ಸಿನಿಮಾ ಹೀರೊಗಳು ನಿಜಜೀವನದಲ್ಲೂ ಹೀರೊಗಳಾಗಿರುತ್ತಾರೆ ಎಂದು ಭಾವಿಸಿ ಹಲವಾರು ಅಭಿಮಾನಿ ಬಳಗಗಳು ಹುಟ್ಟಿಕೊಳ್ಳುವುದನ್ನು ನಾವು ನೋಡಿದ್ದೇವೆ.
ತಮ್ಮ ನಾಯಕ ಹೇಳಿದರೆ ತಾವು ಹಾಳು ಬಾವಿಗೆ ಬೇಕಾದರೆ ಬೀಳುವುದಾಗಿ ಅನಂತ್ ಅವರು ಆಗೊಮ್ಮೆ ಹೇಳಿದ ಹಾಗೆ ಈಗಲೂ ಹೇಳಿಕೆ ಕೊಟ್ಟಿದ್ದಾರೆ. ಈ ಭಕ್ತಿಭಾವ ಆಗಲೂ ಇತ್ತು, ಈಗಲೂ ಇದೆ. ಪಕ್ಷ (ನಿಷ್ಠೆ!) ಬದಲಾಗಿದೆ ಅಷ್ಟೆ.
ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.