ADVERTISEMENT

ಗುರುವಾರ, 8-9-1961

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಪೂರ್ವ ಪಶ್ಚಿಮ ಮಧ್ಯವರ್ತಿಯಾಗಿ ಪ್ರಧಾನಿ ನೆಹರೂ?
ಮಾಸ್ಕೊ, ಸೆ. 7 - ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ನಡೆಸದೆಯೇ ಮಧ್ಯವರ್ತಿಯಾಗಿರಬೇಕೆಂದು ಸೋವಿಯತ್ ಪ್ರಧಾನ ಮಂತ್ರಿ ಖ್ರುಶ್ಚೋವ್‌ರವರು ನೆಹರೂರನ್ನು ಕೇಳಿಕೊಳ್ಳಬಹುದೆಂದು ಇಲ್ಲಿನ ಕೆಲವು ವೀಕ್ಷಕರು ಭಾವಿಸಿದ್ದಾರೆ.

ನಿನ್ನೆ ಇಲ್ಲಿಗೆ ಆಗಮಿಸಿದ ಭಾರತದ ಪ್ರಧಾನ ಮಂತ್ರಿಯನ್ನು ಸ್ವಾಗತಿಸಿದಾಗ ಖ್ರುಶ್ಚೋವ್ ಆಡಿದ ಮಾತುಗಳಿಗೆ ಅವರು ಈ ರೀತಿ ಅರ್ಥಕಲ್ಪಿಸಿದ್ದಾರೆ.

`ಥರ‌್ಮಲ್ ಯೋಜನೆಯೊಂದೇ ತಾತ್ಕಾಲಿಕ ಪರಿಹಾರ ಮಾರ್ಗ~
ಬೆಂಗಳೂರು, ಸೆ. 7 - ಶರಾವತಿ ಯೋಜನೆಯು ಮೊದಲೇ ನಿರೀಕ್ಷಿಸಿದ್ದಂತೆ 1962ರ ಕೊನೆಯವೇಳೆಗೆ `ವಿದ್ಯುಚ್ಛಕ್ತಿ ನೀಡುವ ಸಂಭವವಿಲ್ಲದಿರುವುದರಿಂದ~ ವಿದ್ಯುಚ್ಛಕ್ತಿಯ ಬೇಡಿಕೆಯನ್ನು ಪೂರೈಸಲು ಥರ‌್ಮಲ್ ವಿದ್ಯುತ್ ಯಂತ್ರ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಇಂದು ವಿಧಾನ ಪರಿಷತ್ತಿನಲ್ಲಿ ಒತ್ತಾಯ ಪಡಿಸಲಾಯಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.