ADVERTISEMENT

ಚೀಣಿ ಆಕ್ರಮಣಹಿಮ್ಮೆಟ್ಟಿಸಲು ಸಕಲ ತ್ಯಾಗ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಚೀಣಿ ಆಕ್ರಮಣಹಿಮ್ಮೆಟ್ಟಿಸಲು ಸಕಲ ತ್ಯಾಗ(ನಮ್ಮ ಅಸೆಂಬ್ಲಿ ಪ್ರತಿನಿಧಿಯಿಂದ)
ಬೆಂಗಳೂರು, ಡಿ. 3- ಮಿತ್ರದ್ರೋಹಿ ಚೀಣದ ಆಕ್ರಮಣವನ್ನು ಕೊನೆಗಾಣಿಸಿ ದೇಶವನ್ನು ರಕ್ಷಿಸುವ ಕಾರ‌್ಯದಲ್ಲಿ “ಸರ್ವ ತ್ಯಾಗಕ್ಕೂ ಸಿದ್ಧರಾಗಬೇಕು” ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ರಾಜ್ಯದ ಜನತೆಗೆ ನೀಡಿದ ಕರೆ ಇಂದು ವಿಧಾನ ಮಂಡಲದ ಉಭಯ ಸದನಗಳ ಎಲ್ಲ ಕಡೆಗಳಿಂದಲೂ ಪ್ರತಿಧ್ವನಿತವಾಯಿತು.

ಭಾರತ ಮೇಲೆ ಚೀಣಿ ವಿಮಾನ ಹಾರಾಟಕ್ಕೆ ನಿಷೇಧ
ನವದೆಹಲಿ, ಡಿ. 3- ಕಮ್ಯುನಿಸ್ಟ್ ಚೀಣದಲ್ಲಿ ರಿಜಿಸ್ಟರ್ ಆದ ಇಲ್ಲವೇ ಕಮ್ಯುನಿಸ್ಟ್ ಚೀಣಕ್ಕೆ ಸೇರಿದ  ರಾಷ್ಟ್ರದಿಂದ ನಡೆಸಲ್ಪಡುವ ಹಾಗೂ ಯಾವಾಗಲಾದರೂ ಕಮ್ಯುನಿಸ್ಟ್ ಚೀಣದ ಪ್ರಜೆಯಾಗಿದ್ದವರಿಗೆ ಸೇರಿದ ವಿಮಾನಗಳಾವುವೂ ಭಾರತದ ಯಾವುದೇ ಭಾಗದ ಮೇಲೆ ಹಾರಾಡಕೂಡದೆಂದು ಭಾರತ ಸರ್ಕಾರವು ಇಂದು ಆಜ್ಞೆಯೊಂದನ್ನು ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT