ಸೋಮವಾರ, 6-2-1962
ಚೀಣ ಹಿಮ್ಮೆಟ್ಟದಿದ್ದರೆ ಗೋವ ಕ್ರಮದ ಪುನರಾವೃತ್ತಿ
ರಾಯಪುರ, ಫೆ. 5- ಭಾರತದ ಉತ್ತರ ಗಡಿಯಲ್ಲಿ ಭಾರತ ನೆಲದ ಮೇಲೆ ಚೀಣ ನಡೆಸಿರುವ ಅತಿಕ್ರಮಣವನ್ನು ಬಿಟ್ಟುಕೊಡದಿದ್ದರೆ, ಗೋವದಲ್ಲಿ ಕೈಗೊಂಡ ಕ್ರಮವನ್ನೇ ಅಲ್ಲಿಯೂ ಕೈಗೊಳ್ಳಲು ಭಾರತ ಹಿಂದುಮುಂದು ನೋಡುವುದಿಲ್ಲವೆಂದು ಕೇಂದ್ರ ಗೃಹ ಸಚಿವ ಶ್ರಿ ಲಾಲ್ಬಹದ್ದೂರ್ ಶಾಸ್ತ್ರಿಯವರು ನಿನ್ನೆ ರಾತ್ರಿ ಇಲ್ಲಿ ಘೋಷಿಸಿದರು.
ನೆಹರೂರಿಂದ ಕೋಮು
ಭಾವ ಖಂಡನೆ
ಮಂಗಳೂರು, ಫೆ. 5- ಜನರಲ್ಲಿ ಕೋಮು ಭಾವನೆ ಬೆಳೆದಲ್ಲಿ ಮಹಾ ವಿಪತ್ಕಾರಿ. ಅದು ಭಾರತವನ್ನೇ ನಾಶಮಾಡೀತು ಎಂದು ಪ್ರಧಾನಿ ನೆಹರೂ ಇಂದು ಇಲ್ಲಿ ಎಚ್ಚರಿಸಿ ಕೋಮು ಸಂಸ್ಥೆಗಳನ್ನು ಪ್ರಬಲವಾಗಿ ಖಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.