ADVERTISEMENT

ಬುಧವಾರ, 11-1-1962

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

“ಕೇಂದ್ರದ ಆಡಳಿತಕ್ಕೆ ಗೋವ ಒಳಪಡಲಿ”
ನವದೆಹಲಿ, ಜ. 10-
ಗೋವಾ ರಾಷ್ಟ್ರೀಯ ಸಂಘದ ಅಧ್ಯಕ್ಷ ಶ್ರಿ ಜೆ.ಎಂ. ಡಿಸೌಜ ಅವರ ನಾಯಕತ್ವದಲ್ಲಿ ಗೋವನ್ನರ ನಿಯೋಗವೊಂದು ಪ್ರಧಾನಿ ನೆಹರೂ ಅವರನ್ನು ಇಂದು ಬೆಳಿಗ್ಗೆ ಭೇಟಿ ಮಾಡಿ, ತಾವು ಲೋಕಸಭೆಯಲ್ಲಿ ಪ್ರಕಟಿಸಿದ ಮಾದರಿಯಲ್ಲಿ ಗೋವಾದ ಮುಂದಿನ ಆಡಳಿತ ವ್ಯವಸ್ಥೆಯನ್ನು ಆದಷ್ಟು ಜಾಗ್ರತೆ ರಚಿಸಬೇಕೆಂಬ ಮನವಿಯನ್ನು ಅರ್ಪಿಸಿದ್ದಾರೆ.

ತಿಂಗಳ ಕಡೆಯ ವಾರದಲ್ಲಿ ವಿದ್ಯುತ್ ಉತ್ಪತ್ತಿ
ಬೆಂಗಳೂರು, ಜ. 10-
ಜನವರಿ ಕಡೆಯ ವಾರದಲ್ಲಿ ತುಂಗಭದ್ರಾ ವಿದ್ಯುತ್ ಯೋಜನೆಯ ಒಂದು ಜನರೇಟರು ಕಾರ‌್ಯಾರಂಭ ಮಾಡುವ ನಿರೀಕ್ಷೆಯಿದೆಯೆಂದು ಸರ್ಕಾರದ ವಕ್ತಾರರೊಬ್ಬರು ಇಂದು ವರದಿಗಾರರಿಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT