ADVERTISEMENT

ಬುಧವಾರ, 27–12–1967

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 19:30 IST
Last Updated 26 ಡಿಸೆಂಬರ್ 2017, 19:30 IST

ತಲಘಟ್ಟಪುರ ಬಾವಿ ದುರಂತ: ಮ. ರಾಮಮೂರ್ತಿ, ಇಬ್ಬರು ಪುತ್ರರ ದೇಹ ತೆಗೆಯಲು ಸತತ ಯತ್ನ

ಬೆಂಗಳೂರು, ಡಿ. 26– ತಲಘಟ್ಟಪುರದ ಬಳಿ ಸೋಮವಾರ ಸಂಜೆ ತಮ್ಮ ಜಮೀನಿನ ಬಾವಿ ಕುಸಿದು ಮಣ್ಣಿನಲ್ಲಿ ಹೂತು ಹೋಗಿ ಮರಣ್ಣಕ್ಕೀಡಾದ ಪ್ರಖ್ಯಾತ ಪತ್ತೇದಾರಿ ಕಾದಂಬರಿಕಾರ ಶ್ರೀ ಮ. ರಾಮಮೂರ್ತಿ, ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಕೂಲಿಗಳ ದೇಹಗಳನ್ನು ಮಂಗಳವಾರ ರಾತ್ರಿ 12ರವರೆಗೂ ಹೊರಕ್ಕೆ ತೆಗೆಯಲು ಸಾಧ್ಯವಾಗಿರಲಿಲ್ಲ.

ಬುಧವಾರ ಬೆಳಿಗ್ಗೆ ಮೃತರ ದೇಹಗಳನ್ನು ತೆಗೆಯುವ ಪ್ರಯತ್ನವನ್ನು ಮುಂದುವರೆಸಲಾಗುವುದು.

ADVERTISEMENT

ದುರಂತದ ಸುದ್ದಿ ನಗರಕ್ಕೆ ತಲುಪಿದ ಕೂಡಲೆ ನಿನ್ನೆಯೇ ಬೆಂಗಳೂರು–ಕನಕಪುರ ರಸ್ತೆಯಲ್ಲಿ ಸುಮಾರು 13 ಮೈಲಿ ದೂರದಲ್ಲಿರುವ ಅಲ್ಲಿಗೆ ಪೊಲೀಸ್ ಮತ್ತು ಅಗ್ನಿ ಶಾಮಕಗಳು ಧಾವಿಸಿದವು.

ಬಾವಿಯ ದಡಗಳು ಬಿರುಕು ಬಿಟ್ಟಿರುವುದು ಮಣ್ಣನ್ನು ಎತ್ತುವ ಕೆಲಸ ತಡವಾಗಲು ಮುಖ್ಯ ಕಾರಣವಾಗಿದೆ. ಮಣ್ಣೆತ್ತುವ ಕಾರ್ಯ ತಡವಾದಂತೆಲ್ಲಾ, ಅವರು ಬದುಕಿರಬಹುದೆಂಬ ಆಸೆಯನ್ನು ಕೈಬಿಡಲಾಯಿತು.

*

ಹಿಂದಿ ವಿರೋಧಿ ಪ್ರದರ್ಶಕರ ಹಾವಳಿ

ಮಧುರೆ, ಡಿ. 26– ರಾಮನಾಥ್ ಜಿಲ್ಲೆಯ ಶಿವಗಂಗ ಮತ್ತು ಕಾರೈಕುಡಿಯ ಕಾಲೇಜಿಗೆ ಸೇರಿದ 50ಕ್ಕೂ ಹೆಚ್ಚು ಮಂದಿ ಹಿಂದಿ ವಿರೋಧಿ ವಿದ್ಯಾರ್ಥಿ ಪ್ರದರ್ಶನಕಾರರು ಇಂದು ರಾಮೇಶ್ವರದ ಸುಪ್ರಸಿದ್ಧ ರಾಮನಾಥಸ್ವಾಮಿ ದೇವಾಲಯಕ್ಕೆ ನುಗ್ಗಿ ಹಿಂದಿ ನಾಮಫಲಕಗಳ ಮೇಲೆ ಟಾರು ಬಳಿದರಲ್ಲದೆ ಹೊರ ಪ್ರಾಕಾರದ ಮೇಲೆ ಕೆತ್ತಿದ್ದ ಸಂಸ್ಕೃತ ಶ್ಲೋಕಗಳನ್ನು ಅಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.