ADVERTISEMENT

ಬುಧವಾರ, 8–1–1964

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ನೆಹರೂಗೆ ದೇಹಾಲಸ್ಯ ಪೂರ್ಣ ವಿಶ್ರಾಂತಿಗೆ ಸಲಹೆ
ಭುವನೇಶ್ವರ, ಜ. 7 –
ಪ್ರಧಾನ ಮಂತ್ರಿ ನೆಹರೂ­ರವರಿಗೆ ಇಂದು ಬೆಳಿಗ್ಗೆ ರಕ್ತದ ಒತ್ತಡ ಹೆಚ್ಚಿ, ‘ವಿಪರೀತ ಬಳಲಿಕೆ ಮತ್ತು ನಿಶ್ಯಕ್ತಿ­­ಯಾಯಿತೆಂದು’ ಇಲ್ಲಿರುವ ಅವರ ಶಿಬಿರ­­ದಿಂದ ಹೊರಬಿದ್ದ ಪ್ರಕಟಣೆ ತಿಳಿ­ಸಿದೆ.

ಮೈಸೂರು ವಿಶ್ವವಿದ್ಯಾನಿಲಯ ಉಪಕುಲಪತಿ ಸ್ಥಾನಕ್ಕೆ ಶ್ರೀಮಾಲಿ?
ನವದೆಹಲಿ, ಜ. 7 –
ಕೇಂದ್ರ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ಶ್ರೀ ಕೆ. ಎಲ್‌. ಶ್ರೀಮಾಲಿಯವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಸ್ಥಾನವಹಿಸಲು ಕೋರಲಾಗಿದೆಯೆಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.