ADVERTISEMENT

ಬುಧವಾರ 9-2-1961

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ಗಲಭೆ ಲೂಟಿ: ಗೋಲಿಬಾರ್
ಜಬ್ಬಲ್‌ಪುರ, ಫೆ. 8 - ಕಳೆದ ರಾತ್ರಿ ಮತ್ತು ಇಂದು ಇಲ್ಲಿ ಮತ್ತೆ ನಡೆದ ಗಲಭೆ ಪೊಲೀಸರ ಗೋಲಿಬಾರ್‌ನ ಪರ್ಯವಸಾನಗೊಂಡಾಗ ಕೊನೆಯ ಪಕ್ಷ 12 ಮಂದಿ ಮೃತರಾದರು ಹಾಗೂ 38 ಮಂದಿ ಗಾಯಗೊಂಡರೆಂದು ಇಂದು ಬೆಳಗಿನ ಅಧಿಕೃತ ಅಂದಾಜಿನ ಪ್ರಕಾರ ಗೊತ್ತಾಗಿದೆ.

ಮಾರ್ಚ್ 10 ರಂದು ಬಜೆಟ್ ಮಂಡನೆ
ಬೆಂಗಳೂರು, ಫೆ. 8 - ರಾಜ್ಯದ ಶಾಸನ ಸಭೆ ಆಯವ್ಯಯ ಅಧಿವೇಶನ ತಾತ್ಕಾಲಿಕ ಕಾರ್ಯಕ್ರಮದಂತೆ ಮಾರ್ಚ್ 10 ರಂದು 1961-62ನೇ ಸಾಲಿನ ಆಯವ್ಯಯ ಮಂಡಿಸಲ್ಪಡುವುದು. ಇದೇ ತಿಂಗಳು 27 ರಂದು ಆರಂಭವಾಗುವ ಅಧಿವೇಶನ ಏಪ್ರಿಲ್ 10ರ ವರೆಗೆ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.