ADVERTISEMENT

ಮಂಗಳವಾರ 8-2-1961

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 18:30 IST
Last Updated 7 ಫೆಬ್ರುವರಿ 2011, 18:30 IST


ಯಶಸ್ವಿ ಪಾದಯಾತ್ರೆ
ಬೆಂಗಳೂರು, ಫೆ. 7 - ‘ನಿಮ್ಮ ಮಕ್ಕಳಿಗಾಗಿ, ದೇಶಕ್ಕಾಗಿ ಉಳಿತಾಯ ಮಾಡಿ’ ಸಂದೇಶವನ್ನು ನೂತನ ಮಾರ್ಗದಲ್ಲಿ ನಾಡಿಗೆ ಸಾರಲು ಕೇಂದ್ರದ ಉಪ ಸಚಿವೆ ತಾರಕೇಶ್ವರಿ ಸಿನ್ಹ ಅವರು ಇಂದು ನಗರದಲ್ಲಿ ಕೈಗೊಂಡ ‘ಪಾದಯಾತ್ರೆ’ ಅತ್ಯಂತ ಯಶಸ್ಸುಗೊಂಡು ಸುಮಾರು 14 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿತು.

ವೇತನ ವರದಿ ಸಲ್ಲಿಕೆ
ಬೆಂಗಳೂರು, ಫೆ. 7 - ರಾಜ್ಯದ ಸರ್ಕಾರಿ ನೌಕರರ ವೇತನ ಮಟ್ಟ ಹಾಗೂ ಕೆಲಸದ ಸೌಕರ್ಯಗಳ ಪುನರ್‌ವಿಮರ್ಶೆ ಸಲಹೆ ನೀಡಲು ನೇಮಕಗೊಂಡಿದ್ದ ವೇತನ ಸಮಿತಿಯು ಸರ್ಕಾರಕ್ಕೆ ತನ್ನ ವರದಿಯನ್ನು ಒಪ್ಪಿಸಿದೆ. ೆಬ್ರುವರಿ 12 ರಂದು ಸೇರುವ ಮಂತ್ರಿಮಂಡಳದ ಸಭೆಯಲ್ಲಿ ಈ ವರದಿಯ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.