ಗುರುವಾರ, 17-2-1961
‘ವಿಶ್ವಸಂಸ್ಥೆಬಲಪ್ರಯೋಗ ಮಾಡಲಿ’
ನವದೆಹಲಿ, ಫೆ. 16 - ಕಾಂಗೋದಲ್ಲಿ ಶಾಂತಿ ನೆಲೆಸಲು ಅಡ್ಡಿಯಾಗಿರುವ ಸ್ಥಳೀಯ ಸೇನಾ ಬಲ ಎಂದು ಕರೆದುಕೊಳ್ಳುವ ಶಕ್ತಿಗಳನ್ನು ಎದುರಿಸಲು, ಅಗತ್ಯವಾದರೆ. ವಿಶ್ವಸಂಸ್ಥೆಯು ಬಲಪ್ರಯೋಗ ಮಾಡಬೇಕೆಂದು ಭಾರತದ ಪ್ರಧಾನ ಮಂತ್ರಿ ನೆಹರೂ ಅವರು ಇಂದು ಇಲ್ಲಿ ಹೇಳಿದರು.
ಫಾಲನೇತ್ರಿ
ಹಾಸನ. ಫೆ. 16 - ಆರೇಕಲ್ ಹೊಸಹಳ್ಳಿಯ ಶ್ರೀಮತಿ ನಂಜಮ್ಮ ದೇವೇಗೌಡ ಎಂಬಾಕೆಯು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ನಿನ್ನೆ ವಿಚಿತ್ರ ಸ್ವರೂಪದ ಮೃತ ಶಿಶುವಿಗೆ ಜನ್ಮವಿತ್ತರು. ಈ ಹೆಣ್ಣು ಮಗುವಿಗೆ ಹಣೆೆಯಲ್ಲಿ ಒಂದೇ ಒಂದು ಕಣ್ಣು ಇದ್ದು, ಮೂಗು ಬೆಳದೇ ಇರುವುದು ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.