ಮತೀಯ ಗಲಭೆಗಳಿಂದ ಭಾರತದ ಖ್ಯಾತಿಗೆ ಕುಂದು
ಅಲಹಾಬಾದ್, ಅ. 13 - ಉತ್ತರ ಪ್ರದೇಶದ ಆಲಿಘರ್ ಮೊದಲಾದ ಸ್ಥಳಗಳಲ್ಲಿ ಇತ್ತೀಚೆಗೆ ನಡೆದ ಜಾತೀಯ ಗಲಭೆಗಳನ್ನು ಪ್ರಧಾನ ಮಂತ್ರಿ ನೆಹರೂರವರು ಇಂದು ಖಂಡಿಸಿದರಲ್ಲದೆ ಮತದ ಹೆಸರಿನಲ್ಲಿ ಅಂತಹ ಗಲಭೆಗಳಿಗೆ ಪ್ರೋತ್ಸಾಹ ನೀಡುವ ಜಾತಿಯ ಸಂಸ್ಥೆಗಳಿಂದ ತಮ್ಮ ದಾರಿಗೆಳೆಯಲ್ಪಡ ಬಾರದೆಂದು ಜನರಿಗೆ ಎಚ್ಚರಿಕೆ ನೀಡಿದರು.
ಗ್ರಾಮಸ್ಥರಿಗೆ ಅನುಕೂಲ ಆಗುವ ಬಗ್ಗೆ ಸಂಶಯ
ಬೆಂಗಳೂರು, ಅ.13- ವಿವಾದಿತ ಭೂ ಸುಧಾರಣಾ ಮಸೂದೆಯ ವಿವಿಧ ಅಂಶಗಳನ್ನು ಇಂದು ವಿಧಾನ ಪರಿಷತ್ತಿನಲ್ಲಿ ಕಟುವಾಗಿ ಟೀಕಿಸಿದ ಕಾಂಗ್ರೆಸ್ ಸದಸ್ಯ ಶ್ರೀ ವಿ. ವೆಂಕಟಪ್ಪನವರು ಸರ್ಕಾರ ನಿರೀಕ್ಷಿಸಿರುವಂತೆ ರೈತರಿಗೆ ಇದರಿಂದ ಅನುಕೂಲವಾಗುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.