ADVERTISEMENT

ಶುಕ್ರವಾರ, 25-2-1961

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 16:40 IST
Last Updated 24 ಫೆಬ್ರುವರಿ 2011, 16:40 IST

ಸಂಪುಟಕ್ಕೆ ನಾಲ್ವರು ಹೊಸಬರು?
ಬೆಂಗಳೂರು, ಫೆ. 24 -  ಮೈಸೂರು ರಾಜ್ಯ ಕಾಂಗ್ರೆಸ್ಸಿನಲ್ಲಿರುವ ಭಿನ್ನಾಭಿಪ್ರಾಯ ಪರಿಹಾರದ ಪರಿಣಾಮ ನಾಲ್ವರು ನೂತನ ಮಂತ್ರಿಗಳು ನೇಮಕವಾಗುವುದಲ್ಲದೇ 9 ಮಂದಿ ಸದಸ್ಯರ (ಮುಖ್ಯಮಂತ್ರಿ ಹಾಗೂ ಎಂ.ಪಿ.ಸಿ.ಸಿ. ಅಧ್ಯಕ್ಷರೂ ಸೇರಿ) ಪ್ರದೇಶ ಕಾಂಗ್ರೆಸ್ ಚುನಾವಣೆ ಸಮಿತಿ ರಚನೆಯಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
   
ಸಚಿವರಿಬ್ಬರ ಭಿನ್ನ ನಿಲುವು

ನವದೆಹಲಿ, ಫೆ. 24 - ಸಚಿವರಿಬ್ಬರು ಇಂದು ಸರ್ಕಾರದ ನೀತಿಯೊಂದರ ವಿಷಯದಲ್ಲಿ ಲೋಕ ಸಭೆಯಲ್ಲಿ ಭಿನ್ನ ಭಿನ್ನ ರೀತಿಯ ಹೇಳಿಕೆಗಳನ್ನಿತ್ತರು.  
 
ರೈತರ ಬ್ಯಾಂಕುಗಳನ್ನು ಸ್ಥಾಪಿಸುವ ವಿಷಯದಲ್ಲಿ ಶ್ರೀ ಎಸ್. ಕೆ. ಡೇ ಮತ್ತು ಡಾ. ಪಂಜಾಬರಾವ್ ದೇಶಮುಖ್‌ರ ನಡುವೆ ಮಾತಿನ ಚಕಮಕಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.