ADVERTISEMENT

ಶುಕ್ರವಾರ, 9-3-1962

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಎಸ್. ಆರ್. ಕಂಠಿ ಆಯ್ಕೆ
ಬೆಂಗಳೂರು, ಮಾ. 8 - ಹೈಕಮಾಂಡಿನ ಪ್ರತಿನಿಧಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪಕ್ಷದ ಸದಸ್ಯರ `ಅಧಿಕ ಬಹಮತ~ವಿದೆಯೆಂಬುದನ್ನು ಅರಿತು ಪಕ್ಷಕ್ಕೆ ತಿಳಿಸಿದ ನಂತರ ಇಂದು ಬೆಳಿಗ್ಗೆ ನಡೆದ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ಸಭೆ, ವಿಧಾನ ಸಭೆಯ `ಉಸ್ತುವಾರಿ~ ಅಧ್ಯಕ್ಷ ಶ್ರೀ ಎಸ್. ಆರ್. ಕಂಠಿ ಅವರನ್ನು ತನ್ನ ನಾಯಕನನ್ನಾಗಿ ಸರ್ವಾನುಮತದಿಂದ ಆರಿಸಿತು.

`ಕೇರಳದ ಸಮ್ಮಿಶ್ರ ಸಂಪುಟದ ಮುಂದುವರಿಕೆ ಸಲ್ಲದು~
ತಿರಚೂರು, ಮಾ. 8 - ಪಾರ್ಲಿಮೆಂಟಿಗೆ ನಡೆದ ಚುನಾವಣೆಯಲ್ಲಿ ಪಡೆದ ಸ್ಥಾನಗಳು ಹಾಗೂ ಮತಗಳ ದೃಷ್ಟಿಯಿಂದ `ಭಾರಿ ಸೋಲು~ ಅನುಭವಿಸಿರುವುದರಿಂದ, ಕೇರಳದಲ್ಲಿ ಕಾಂಗ್ರೆಸ್ - ಪಿ.ಎಸ್.ಪಿ. ಸಮ್ಮಿಶ್ರ ಸಂಪುಟದ ಮುಂದುವರಿಯುವುದು ನ್ಯಾಯ ಸಮ್ಮತವಾದುದಲ್ಲವೆಂದು ಕೇರಳ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಳಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.