l ರಾಜ್ಯ ಜನತಾದಳ ವಿಭಜನೆಯತ್ತ
ಬೆಂಗಳೂರು, ಜುಲೈ 2– ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಳೆ ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಎಚ್ಚರಿಕೆ ನೀಡಿದ್ದರೂ ಚುನಾವಣೆಯನ್ನು ಬಹಿಷ್ಕರಿಸಲು ಪಕ್ಷದ ಕೆಲವು ನಾಯಕರು ನಿರ್ಧರಿಸಿದ್ದರಿಂದ ರಾಜ್ಯದಲ್ಲೂ ಜನತಾದಳ ವಿಭಜನೆಯಾಗುವುದು ಖಚಿತವಾಗಿದೆ.
ಚುನಾವಣೆ ಬಹಿಷ್ಕರಿಸುವುದು ಪಕ್ಷದ ಶಿಸ್ತು, ಉಲ್ಲಂಘನೆ ಮತ್ತು ಪ್ರಜಾತಂತ್ರ ವಿರೋಧಿ ಕ್ರಮವೆಂದು ಪರಿಗಣಿಸಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜೆ.ಎಚ್. ಪಟೇಲ್ ಅವರು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.