ADVERTISEMENT

ಶುಕ್ರವಾರ, 16–12–1994

ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 20:04 IST
Last Updated 15 ಡಿಸೆಂಬರ್ 2019, 20:04 IST

ಕಳಂಕಿತ ಸಚಿವರ ರಾಜೀನಾಮೆ– ಪ್ರಧಾನಿ ಸೂಚನೆ

ನವದೆಹಲಿ, ಡಿ. 15 (ಪಿಟಿಐ, ಯುಎನ್‌ಐ)– ಸಕ್ಕರೆ ಆಮದು ಹಗರಣದಲ್ಲಿ ಒಳಗೊಂಡಿರುವ ಎಲ್ಲ ಸಚಿವರು ಸ್ವಯಂಪ‍್ರೇರಣೆಯಿಂದ ರಾಜೀನಾಮೆ ಕೊಡಬೇಕು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಸೂಚಿಸಿದರು.

ಅವರು ಕಾಂಗೈ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಈ ಇಂಗಿತ ವ್ಯಕ್ತಪಡಿಸಿದಾಗ ಸದಸ್ಯರು ಮೇಜು ಗುದ್ದಿ ಸ್ವಾಗತಿಸಿದರು.

ADVERTISEMENT

ಎ.ಕೆ. ಆಂಟನಿ ಅವರ ರಾಜೀನಾಮೆ ಬಗ್ಗೆ ಪ್ರಧಾನಿ ದಿಗ್ಭ್ರಾಂತಿ ವ್ಯಕ್ತಪಡಿಸಿದರು. ‘ಆಂಟನಿ ರಾಜೀನಾಮೆ ಕೊಡಬೇಕಾಗಿ ಬಂದದ್ದು ವಿಧಿಯ ಅಣಕ. ಅವರು ಏನೂ ತಪ್ಪು ಮಾಡಿಲ್ಲ ಎಂದು ನನಗೆ ಗೊತ್ತು. ಅವರನ್ನು 25 ವರ್ಷಗಳಿಂದ ಬಲ್ಲೆ. ಅವರ ಪ್ರಾಮಾಣಿಕತೆ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದು ರಾವ್ ಹೇಳಿದರು.

ಕಾರ್ನಾಡ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನವದೆಹಲಿ, ಡಿ. 15 (ಯುಎನ್‌ಐ, ಪಿಟಿಐ)– ಬಹುಮುಖ ಪ್ರತಿಭೆಯ ನಟ–ನಿರ್ದೇಶಕ–ನಾಟಕಕಾರ ಗಿರೀಶ್ ಕಾರ್ನಾಡ್ ಸೇರಿದಂತೆ ದೇಶದ 22 ಮಂದಿ ಸಾಹಿತಿಗಳಿಗೆ 1994ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

‘ತಲೆದಂಡ’ ನಾಟಕ ಕೃತಿಗಾಗಿ ಗಿರೀಶ್ ಕಾರ್ನಾಡ್ ಅವರು ಈ ಪ್ರಶಸ್ತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.