ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 25.4.1997

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 19:31 IST
Last Updated 24 ಏಪ್ರಿಲ್ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

5000 ಕೋಟಿ ಮೌಲ್ಯದ ಹಗರಣ ತನಿಖೆ ವಿಳಂಬಕ್ಕೆ ತರಾಟೆ

ನವದೆಹಲಿ, ಏ. 24 (ಯುಎನ್‌ಐ, ಪಿಟಿಐ)– ಐದು ಸಾವಿರ ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳ ಆಮದು ಹಗರಣ ತನಿಖೆ ವಿಳಂಬ ಆಗುತ್ತಿರುವುದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಆರೋಗ್ಯ ಸೇವೆ ನಿರ್ದೇಶನಾಲಯ ಗಳನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್, ಈ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಸೂಚಿಸಿತು.

ಪೊಲೀಸರ ಗುಂಡಿಗೆ ಚಿರತೆ, ಕಾರ್ಮಿಕನ ಬಲಿ

ADVERTISEMENT

ಬೆಂಗಳೂರು, ಏ. 24– ದಿಕ್ಕುತಪ್ಪಿ ಆಶ್ಚರ್ಯ ಕರ ರೀತಿಯಲ್ಲಿ ನಗರದೊಳಕ್ಕೆ ನುಸುಳಿದ ಗಂಡು ಚಿರತೆ ಮರಿಯೊಂದನ್ನು ಜೀವಸಹಿತ ಹಿಡಿಯಲು ವಿಫಲರಾದ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವಿವೇಚನಾರಹಿತವಾಗಿ ಯದ್ವಾತದ್ವಾ ಗುಂಡು ಹಾರಿಸಿ ಚಿರತೆಯನ್ನು ಕೊಂದುದಲ್ಲದೆ, ಚಿರತೆಯ ‘ಬೇಟೆ’ ನೋಡುತ್ತಿದ್ದ ಕಾರ್ಮಿಕನೊಬ್ಬನನ್ನು ಬಲಿ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.

ಸತ್ತ ಚಿರತೆ ದೇಹವನ್ನು ಬನ್ನೇರುಘಟ್ಟ ಅರಣ್ಯಕ್ಕೆ ಒಯ್ಯಲಾಗಿದೆ. ಗುಂಡು ತಗುಲಿ ಮೃತಪಟ್ಟ ವ್ಯಕ್ತಿಯನ್ನು ಬಿಇಎಲ್ ಕಾರ್ಖಾ ನೆಯ ಕಾರ್ಮಿಕ ಮುರಳೀಧರನ್ ಎಂದು ಗುರುತಿಸಲಾಗಿದೆ. ಗುಂಡು ಕತ್ತಿನ ಮೂಲಕ ಪ್ರವೇಶಿಸಿ ಗಂಟಲಿನಿಂದ ಹೊರಬಂದ ಪರಿಣಾಮವಾಗಿ ಆತ ಮೃತಪಟ್ಟಿದ್ದಾನೆ ಎಂದು ಬಿಇಎಲ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.