ADVERTISEMENT

25 ವರ್ಷಗಳ ಹಿಂದೆ: ಬಾಬ್ರಿ ಮಸೀದಿ ಪ್ರಕರಣ: ದೇಶದಾದ್ಯಂತ ಪ್ರತಿಭಟನೆ

ಪ್ರಜಾವಾಣಿ ವಿಶೇಷ
Published 6 ಡಿಸೆಂಬರ್ 2023, 23:42 IST
Last Updated 6 ಡಿಸೆಂಬರ್ 2023, 23:42 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬಾಬ್ರಿ ಮಸೀದಿ ಪ್ರಕರಣ: ದೇಶದಾದ್ಯಂತ ಪ್ರತಿಭಟನೆ

ನವದೆಹಲಿ, ಡಿ. 6 (ಪಿಟಿಐ, ಯುಎನ್‌ಐ)– ಅಯೋಧ್ಯೆಯ ಬಾಬ್ರಿ ಮಸೀದಿ ನೆಲಸಮಗೊಂಡ ಆರನೇ ವರ್ಷಾಚರಣೆ ದಿನವಾದ ಇಂದು ಕೇರಳದ ಕೆಲವೆಡೆ ಕಲ್ಲು ತೂರಾಟದಂಥ ಹಿಂಸಾಚಾರ ಪ್ರಕರಣಗಳು ನಡೆದರೆ, ಪುದುಚೇರಿಯಲ್ಲಿ ಅರೆಸೇನಾ ಪಡೆಯ ಯೋಧರು ಪಥಸಂಚಲನ ನಡೆಸಿದರು.

ಡಿಸೆಂಬರ್ 6, 1992ರಂದು ಅಯೋಧ್ಯೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಬಾಬ್ರಿ ಮಸೀದಿ ನೆಲಸಮ ಮಾಡಿದ್ದನ್ನು ಪ್ರತಿಭಟಿಸಿ ದೇಶದಾದ್ಯಂತ ಮೆರವಣಿಗೆಗಳು, ಪ್ರದರ್ಶನಗಳು ಹಾಗೂ ಸಭೆಗಳು ನಡೆದವು.

ದೇವಲಗಾಣಗಾಪುರ: ಘರ್ಷಣೆ, ಗಾಳಿಯಲ್ಲಿ ಗುಂಡು

ಕಲ್ಬುರ್ಗಿ, ಡಿ. 6– ದೇವಲಗಾಣಗಾಪುರದಲ್ಲಿ ಎರಡು ಪ್ರಬಲ ರಾಜಕೀಯ ಗುಂಪುಗಳ ನಡುವಿನ ವೈಷಮ್ಯ ಸ್ಫೋಟಿಸಿ ಗುಂಡು ಹಾರಿಸ ಲಾಯಿತಲ್ಲದೆ, ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ವಿಠ್ಠಲ ಹೇರೂರ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.

ADVERTISEMENT

ಅಫ್ಜಲಪುರ ತಾಲ್ಲೂಕಿನ ದೇವಲಗಾಣ ಗಾಪುರದಲ್ಲಿ ಜಿಲ್ಲಾ ಸಚಿವ ಮಾಲೀಕಯ್ಯ ಗುತ್ತೇದಾರ್ ಹಾಗೂ ವಿಠ್ಠಲ ಹೇರೂರ ಅವರ ಗುಂಪುಗಳ ನಡುವೆ ಘರ್ಷಣೆ ಇಂದೂ ಮುಂದುವರಿದು, ಹೇರೂರ ಹಾಗೂ ಅವರ ಅಂಗರಕ್ಷಕ ತೀವ್ರ ಗಾಯಗೊಂಡಿದ್ದಾರೆ. ಪರಿಸ್ಥಿತಿ ಈಗ ಶಾಂತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.