ADVERTISEMENT

50 ವರ್ಷಗಳ ಹಿಂದೆ, ಬುಧವಾರ 8–12–2021

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 21:23 IST
Last Updated 7 ಡಿಸೆಂಬರ್ 2021, 21:23 IST

ಜೆಸ್ಸೂರು, ಸಿಲ್ಹೆಟ್‌, ಮೆಹರ್‌ಪುರ ಪತನ; ಕೊಮಿಲ್ಲಾಗೆ ಮುತ್ತಿಗೆ

ನವದೆಹಲಿ, ಡಿ. 7– ಬಾಂಗ್ಲಾದೇಶದಲ್ಲಿ ಪ್ರತಿಷ್ಠಿತ ಆಯಕಟ್ಟಿನ ಕೇಂದ್ರಗಳಾದ ಜೆಸ್ಸೂರು, ಸಿಲ್ಹೆಟ್‌, ಮೆಹರ್‌ಪುರಗಳ ಪತನ ಭಾರತೀಯ ಪಡೆಗಳ ಇಂದಿನ ಮಹತ್ತರ ಸಾಧನೆ. ಪೂರ್ವ ವಲಯದಲ್ಲಿ ಕೊಮಿಲ್ಲಾ ಮುತ್ತಿಗೆಗೆ ಒಳಗಾಗಿದ್ದು ಯಾವ ಗಳಿಗೆಯಲ್ಲಾದರೂ ಪತನಗೊಳ್ಳುವ ಸ್ಥಿತಿಯಲ್ಲಿದೆ.

ಲಾಲ್‌ ಮುನೀರ್‌ ಹಾತ್‌, ಜೇಂಡಿಯಾ ಮುಂತಾದ ಸ್ಥಳಗಳು ವಿಮೋಚನೆಗೊಂಡಿವೆ.

ADVERTISEMENT

ಪಾಕ್‌ ಆಕ್ರಮಿತ ಕಾಶ್ಮೀರದ
ಕೆಲವು ಭಾಗಗಳು ವಿಮುಕ್ತ

ಶ್ರೀನಗರ, ಡಿ. 7– ತಿತ್ವಾಲ್‌ ವಿಭಾಗದ ಎದುರಿಗೆ ಇರುವ ಪಾಕ್‌ ಆಕ್ರಮಿತ ಕಾಶ್ಮೀರದ ಕೆಲವು ಭಾಗಗಳನ್ನು ಭಾರತೀಯ ಸಶಸ್ತ್ರ ಸೈನಿಕರು ವಿಮೋಚನೆಗೊಳಿಸಿದರು ಎಂದು ಅಧಿಕೃತ ವಕ್ತಾರರು ಇಂದು ತಿಳಿಸಿದರು.

ಪಾಕಿಸ್ತಾನಿ ಸೈನಿಕರೊಡನೆ ಹೋರಾಟ ನಡೆಸಿ ಈ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತೆಂದೂ ಈ ವಕ್ತಾರರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.