ಇಂಡೊ– ಚೀನಾದಿಂದ ವಿದೇಶಿ ಪಡೆ ವಾಪಸಿಗೆ ದಿನೇಶ್ ಸಿಂಗ್ ಕರೆ
ನವದೆಹಲಿ, ಏ. 8– ಇಂಡೊ– ಚೀನಾದ ಎಲ್ಲ ‘ವಿದೇಶಿ ಪಡೆಗಳನ್ನೆಲ್ಲಾ’ ವಾಪಸುಕರೆಸಿಕೊಳ್ಳಬೇಕೆಂದೂ ಅದರಿಂದ ವಿಯೆಟ್ನಾಂ, ಕಾಂಬೋಡಿಯಾ ಹಾಗೂ ಲಾವೋಸಿನ ಜನರು ತಮ್ಮ ಸಮಸ್ಯೆಗಳೇನೆಂಬುದನ್ನು ಅರಿತುಕೊಳ್ಳುವುದು ಸಾಧ್ಯವಾಗುತ್ತದೆಂದೂ ಇದೊಂದೇ ಈ ಸಮಸ್ಯೆಗೆ ಪರಿಹಾರವೆಂದೂ ವಿದೇಶಾಂಗ ಸಚಿವ ದಿನೇಶ್ ಸಿಂಗ್ ಇಂದು ಕರೆಯಿತ್ತರು.
ಪ್ರಾಣಿಶಾಸ್ತ್ರ ಪ್ರಶ್ನೆಪತ್ರಿಕೆ ಬಯಲು: ಪರೀಕ್ಷೆ ಮುಂದಕ್ಕೆ
ಮೈಸೂರು, ಏ. 8– ಮೈಸೂರು ವಿಶ್ವವಿದ್ಯಾನಿಲಯದ ಕೊನೆಯ ವರ್ಷದ ಬಿ.ಎಸ್ಸಿ ಪ್ರಾಣಿಶಾಸ್ತ್ರ (ಮೇಜರ್) ವಿಭಾಗದ ಪರೀಕ್ಷೆಯನ್ನು ಮೇ 4, 5 ಮತ್ತು 6ನೇ ತಾರೀಖುಗಳಿಗೆ ಮುಂದಕ್ಕೆ ಹಾಕಲಾಗಿದೆ.
ಪರೀಕ್ಷೆ ಇಂದಿನಿಂದ ಆರಂಭವಾಗಬೇಕಾಗಿತ್ತು. ಪ್ರಶ್ನೆಪತ್ರಿಕೆಗಳು ಬಹಿರಂಗವಾದ ಕಾರಣ ಈ ಕ್ರಮ ಕೈಗೊಳ್ಳಲಾಯಿತೆಂದು ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.