ವಿಧಾನಪರಿಷತ್ ಚುನಾವಣೆ ಸಂಸ್ಥಾ ಕಾಂಗ್ರೆಸ್ಗೆ ಜಯ
ಬೆಂಗಳೂರು, ಮೇ 8– ಸ್ಥಳೀಯ ಸಂಸ್ಥೆಗಳ ಏಳು ಕ್ಷೇತ್ರಗಳಿಂದ ರಾಜ್ಯ ವಿಧಾನಪರಿಷತ್ತಿಗೆ ನಿನ್ನೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾದ ಆರು ಸ್ಥಾನಗಳನ್ನೂ ಸಂಸ್ಥಾ ಕಾಂಗ್ರೆಸ್ ಪಡೆಯಿತು.
ಬೆಂಗಳೂರು ಮತ್ತು ಮೈಸೂರು ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಜೆ.ಲಿಂಗೇಗೌಡ ಮತ್ತು ಶ್ರೀ ಎಂ.ಸಿ.ಬಸಪ್ಪನವರು ಗಳಿಸಿದ ವಿಜಯ, ಇಂದಿನ ಫಲಿತಾಂಶದ ಮುಖ್ಯಾಂಶಗಳು.
ಸಂಸತ್ತಿನಲ್ಲಿ ಸದಸ್ಯರ ಭಾಷಣದ ಬಗ್ಗೆ ಕೋರ್ಟು ಕ್ರಮಗಳು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಘೋಷಣೆ
ನವದೆಹಲಿ, ಮೇ 8– ಸಂಸತ್ತು ಅಧಿವೇಶನದಲ್ಲಿದ್ದು ಕಾರ್ಯನಿರತವಾಗಿದ್ದಾಗ, ಅಂಥ ಕಾರ್ಯನಿರ್ವಹಣೆ ಕಾಲದಲ್ಲಿ ಏನೇ ಹೇಳಿದರೂ ಅದಾವುದನ್ನೂ ಯಾವ ನ್ಯಾಯಾಲಯದಲ್ಲೂ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶ್ರೇಷ್ಠ ನ್ಯಾಯಾಧೀಶರ ಅಧ್ಯಕ್ಷತೆಯ ಆರು ನ್ಯಾಯಾಧೀಶರ ಪೀಠ ಇಂದು ಘೋಷಿಸಿತು.
ಶ್ರೇಷ್ಠ ನ್ಯಾಯಾಧೀಶ ಹಿದಾಯತ್ ಉಲ್ಲಾ ಅವರು ತೀರ್ಪು ಓದಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.