ADVERTISEMENT

50 ವರ್ಷಗಳ ಹಿಂದೆ: ಬುಧವಾರ, 25-11-1970

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 19:45 IST
Last Updated 24 ನವೆಂಬರ್ 2020, 19:45 IST
   

ಕೇಂದ್ರದ ನೆರವಿಲ್ಲದಿದ್ದರೂ ಕೃಷ್ಣಾ ಯೋಜನೆ ಪೂರೈಕೆ: ಮುಖ್ಯಮಂತ್ರಿ ಘೋಷಣೆ
ಬಾಗಲಕೋಟೆ, ನ. 24–
ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ನೆರವು ನೀಡಲಿ ಅಥವಾ ನೀಡದಿರಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರೈಸಲು ರಾಜ್ಯ ಸರ್ಕಾರ ನಿರ್ಧರಿಸಿದೆಯೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದರು.

ಕಾವೇರಿ ನೀರು ಮತ್ತು ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲವೆಂದು ಹೇಳಿದ ಮುಖ್ಯಮಂತ್ರಿಗಳು, ಮಹಾಜನ್ ವರದಿ ಕಾರ್ಯಗತವಾಗಬೇಕೆಂಬ ರಾಜ್ಯದ ನಿಲುವನ್ನು ಪುನರ್ ಪ್ರತಿಪಾದಿಸಿದರು.

ಹೊಸಪೇಟೆ ಉಕ್ಕು ಕಾರ್ಖಾನೆ: ಶೀಘ್ರದಲ್ಲೇ ನಿವೇಶನ ನಿರ್ಧಾರ
ಬೆಂಗಳೂರು, ನ. 24–
ಹೊಸಪೇಟೆ ಉಕ್ಕಿನ ಕಾರ್ಖಾನೆ ನಿವೇಶನದ ಅಧ್ಯಯನಕ್ಕೆ ಬಂದಿದ್ದ ತಜ್ಞರ ತಂಡವನ್ನು ತುರ್ತು ಸಮಾ ಲೋಚನೆಗೆಂದು ಕೇಂದ್ರ ಸರ್ಕಾರ ದೆಹಲಿಗೆ ಕರೆಸಿಕೊಂಡಿರುವುದನ್ನು ಗಮನಿಸಿದರೆ, ನಿವೇಶನದ ಬಗ್ಗೆ ಕೇಂದ್ರದ ನಿರ್ಧಾರ ಸದ್ಯದಲ್ಲಿಯೇ ಪ್ರಕಟವಾಗುವಂತಿದೆ ಎಂದು ಇಲ್ಲಿನ ಕೆಲವು ವಲಯಗಳಲ್ಲಿ ಭಾವಿಸಲಾಗಿದೆ.

ADVERTISEMENT

ಕೇಂದ್ರ ಉಕ್ಕು ಇಲಾಖೆಯ ತಜ್ಞರು ನ. 22ರಂದು ಬೆಂಗಳೂರಿಗೆ ಬಂದು ಕೆಲವು ವಿಷಯಗಳ ಬಗ್ಗೆ ಸ್ಪಷ್ಟೀಕರಣ ಪಡೆದು, ಹೈದರಾಬಾದ್‌ ಮಾರ್ಗವಾಗಿ ಇಂದು ದೆಹಲಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.