ADVERTISEMENT

ಮಂಗಳವಾರ, 27–5–1969

​ಪ್ರಜಾವಾಣಿ ವಾರ್ತೆ
Published 26 ಮೇ 2019, 20:00 IST
Last Updated 26 ಮೇ 2019, 20:00 IST

ಚಂದ್ರ ಪ್ರವಾಸದ ನಂತರ ಅಪೊಲೊ ಯಾತ್ರಿಗಳು ಸುರಕ್ಷಿತ ಧರೆಗೆ

ಹೂಸ್ಟನ್ (ಟೆಕ್ಸಾಸ್), ಮೇ 26– ಎಂಟು ದಿನಗಳ ಅತ್ಯಂತ ಸಾಹಸಮಯ ಚಂದ್ರ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಅಪೊಲೊ–10 ಬಾಹ್ಯಾಕಾಶ ನೌಕೆ ಇಂದು ಕರಾರುವಾಕ್ಕಾಗಿ 10.22 ಗಂಟೆಗೆ ಶಾಂತಿ ಸಾಗರದಲ್ಲಿ ಸುರಕ್ಷಿತವಾಗಿ ಇಳಿಯಿತು.

**

ADVERTISEMENT

ಧ್ರುವೀಕರಣದ ಮಾತಿಗೆ ರಾಜಕೀಯ ಆಶಾಭಂಗ ಕಾರಣ ಎಂದು ಇಂದಿರಾ

ನವದೆಹಲಿ, ಮೇ 26– ಕಾಂಗ್ರೆಸ್ ಪಕ್ಷದ ಭಿನ್ನ ರಾಜಕೀಯ ಪ್ರವೃತ್ತಿ ಹೊಂದಿರುವವರ ‘ಧ್ರುವೀಕರಣ’ದ ಮಾತು ವ್ಯಕ್ತಿಗಳಲ್ಲಿ ಉಂಟಾಗಿರುವ ಆಶಾಭಂಗದ ಪ್ರತಿರೂಪವೇ ಹೊರತು ತೀವ್ರವಾದ ರಾಜಕೀಯ ವಿವೇಚನೆಯಿಂದ ಮೂಡಿಬಂದಿರುವ ಫಲವಲ್ಲ ಎಂದು ಪ್ರಧಾನಿ ಇಂದಿರಾಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕತ್ವ ತನಗೆ ಪ್ರೇರಕವಾದ ದೃಷ್ಟಿಯನ್ನೂ, ತಾನು ಬದ್ಧವಾಗಿರುವ ಗುರಿಗಳನ್ನೂ ಈಗ ಕಳೆದುಕೊಳ್ಳಬಾರದು ಎಂದವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.