ಕೊಸಿಗಿನ್–ಯಾಹ್ಯಾ ಜಂಟಿ ಹೇಳಿಕೆ: ತಷ್ಕೆಂಟ್ ಪ್ರಸ್ತಾಪವಿಲ್ಲದ ಬಗ್ಗೆ ದೆಹಲಿ ಗಮನ; ಶಾಂತಿ ಯತ್ನಕ್ಕೆ ಸ್ವಾಗತ
ನವದೆಹಲಿ, ಮೇ 31– ರಾವಲ್ಪಿಂಡಿಗೆ ರಷ್ಯ ಪ್ರಧಾನಿ ಕೊಸಿಗಿನ್ ಅವರು ಭೇಟಿ ಕೊಟ್ಟ ಕೊನೆಯಲ್ಲಿ ಹೊರಡಿಸಿದ ಜಂಟಿ ಪ್ರಕಟಣೆ
ಯಲ್ಲಿ ತಷ್ಕೆಂಟ್ ಒಪ್ಪಂದದ ಯಾವುದೇ ಪ್ರಸ್ತಾಪವಿಲ್ಲದಿರುವುದನ್ನು ಭಾರತ ಸರಕಾರ ಗಮನಿಸಿದೆ.
ರಷ್ಯ–ಪಾಕಿಸ್ತಾನ ನಾಯಕರ ನಡುವಣ ಮಾತುಕತೆಯ ನಂತರ ಹೊರಡಿಸಿದ ಜಂಟಿ ಪ್ರಕಟಣೆಯಲ್ಲಿ ತಷ್ಕೆಂಟ್ ಒಪ್ಪಂದದ ಪ್ರಸ್ತಾಪ
ವಿಲ್ಲದಿರುವುದು ಇದೇ ಮೊದಲ ಬಾರಿ.
ಚಂದ್ರನಲ್ಲಿ ಕಾಯಂ ಕಾಲೋನಿ
ನವದೆಹಲಿ, ಮೇ 31– ಅಪೊಲೊ ನಂತರ ಏನು ಎಂಬ ಪ್ರಶ್ನೆಗೆ ಉತ್ತರ ‘ಚಂದ್ರನಲ್ಲಿ ಕಾಯಂ ಕಾಲೋನಿ.’
ನ್ಯೂಯಾರ್ಕ್ ಟೈಂಸ್ ಪತ್ರಿಕೆಯಲ್ಲಿ ಐಸಾಕ್ ಅನಿಮೋವ್ ಅವರು ಚಂದ್ರಲೋಕದಲ್ಲಿ ಮಾನವರ ಕಾಲೋನಿಯ ಕಲ್ಪನೆಯ ಚಿತ್ರವನ್ನು ಪ್ರಕಟಿಸಿದ್ದಾರೆ. ಕಲಾವಿದ ರಾಯ್ ಕಾರ್ಪೊ ಇದನ್ನು ಚಿತ್ರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.