ADVERTISEMENT

ಶನಿವಾರ, 29–11–1969

ಶನಿವಾರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 19:21 IST
Last Updated 28 ನವೆಂಬರ್ 2019, 19:21 IST

ಸಿ.ಎಸ್. ಆದೇಶಕ್ಕೆ ರಾಜ್ಯ ಕಾಂಗ್ರೆಸ್ ಕಾರ್ಯಸಮಿತಿ ಧಿಕ್ಕಾರ

ಬೆಂಗಳೂರು, ನ. 28– ಪ್ರದೇಶ ಕಾಂಗ್ರೆಸ್ ಕಾರ್ಯನಿರ್ವಾಹಕ ಸಮಿತಿಯನ್ನು ‘ಸಸ್ಪೆಂಡ್’ ಮಾಡಿ ಪ್ರಧಾನಿ ಕಾಂಗ್ರೆಸ್ಸಿನ ಅಧ್ಯಕ್ಷ ಶ್ರೀ ಸಿ. ಸುಬ್ರಹ್ಮಣ್ಯಂ ಅವರು ಹೊರಡಿಸಿರುವ ಆಜ್ಞೆ ‘ನೈತಿಕ ಹಾಗೂ ಕಾನೂನು ಅಧಿಕಾರವಿಲ್ಲದೆ ಕೈಗೊಂಡ ಕ್ರಮ’ವೆಂದು, ಇಂದು ನಡೆದ ಕಾರ್ಯನಿರ್ವಾಹಕ ಸಮಿತಿ ಸಭೆ ಸಾರಿ ಅದನ್ನು ಪೂರ್ಣವಾಗಿ ನಿರ್ಲಕ್ಷಿಸಲು ಸರ್ವಾನುಮತದಿಂದ ತೀರ್ಮಾನಿಸಿತು.

ದೆಹಲಿಯಲ್ಲಿ ನಡೆದ ಕೋರಿಕೆ ಏ.ಐ.ಸಿ.ಸಿ. ಅಧಿವೇಶನ ‘ಅಕ್ರಮ’ವೆಂದು ಹೇಳಿ ಶ್ರೀ ನಿಜಲಿಂಗಪ್ಪ ಅವರು
ಅಧ್ಯಕ್ಷರಾಗಿರುವ ಅಖಿಲ ಭಾರತ ಕಾಂಗ್ರೆಸ್ಸಿಗೆ ತನ್ನ ನಿಷ್ಠೆ ಹಾಗೂ ಬೆಂಬಲವನ್ನು ಸಮಿತಿ ‍ಪ್ರತಿಪಾದಿಸಿತು.

ADVERTISEMENT

ಭೂಸುಧಾರಣೆಗಳ ತ್ವರಿತ, ಪರಿಣಾಮಕಾರಿ ಜಾರಿಗೆ ಇಂದಿರಾ ಕರೆ

ನವದೆಹಲಿ, ನ. 28– ನಾಲ್ಕನೇ ಯೋಜನೆ ಅವಧಿಯಲ್ಲಿ ಕಾರ್ಯರೂಪಕ್ಕೆ ತರಲು ಭೂಸುಧಾರಣಾ ಕಾರ್ಯಕ್ರಮದ ಸುಸಂಘಟಿತ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.

ಭೂಸುಧಾರಣೆ ಕುರಿತ ಮುಖ್ಯಮಂತ್ರಿಗಳ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಪ್ರಧಾನಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.