ADVERTISEMENT

50 ವರ್ಷದ ಹಿಂದೆ: ಗಿರಿ ಮಧ್ಯಪ್ರವೇಶಕ್ಕಾಗಿ ಸಂಸತ್ ವಿರೋಧ ಪಕ್ಷ ನಾಯಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮೇ 2024, 1:06 IST
Last Updated 14 ಮೇ 2024, 1:06 IST
   

ನವದೆಹಲಿ, ಮೇ 13– ರೈಲ್ವೆ ನೌಕರರ ಮುಷ್ಕರ ಇಂದು ಆರನೆಯ ದಿನಕ್ಕೆ ಕಾಲಿಟ್ಟಂತೆ, ಹಿರಿಯ ಕಾರ್ಮಿಕ ನಾಯಕರೂ ರೈಲ್ವೆ ನೌಕರರ ಒಕ್ಕೂಟದ ಅಧ್ಯಕ್ಷರೂ ಆದ ರಾಷ್ಟ್ರಪತಿ ವಿ.ವಿ. ಗಿರಿಯವರು ಮಧ್ಯಪ್ರವೇಶ ಮಾಡಿ ವಿವಾದ ಬಗೆಹರಿಸಬೇಕೆಂದು ಸಂಸತ್ತಿನ ವಿರೋಧ ಪಕ್ಷಗಳ ನಾಯಕರು ಆಗ್ರಹಪಡಿಸಿದ್ದಾರೆ.

ಆರು ವಿರೋಧ ಪಕ್ಷಗಳಿಗೆ ಸೇರಿದ ಎಂಟು ಮಂದಿ ಸಂಸತ್ ಸದಸ್ಯರು ಇಂದು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಅವರ ಮಧ್ಯಪ್ರವೇಶಕ್ಕೆ ಒತ್ತಾಯಪಡಿಸುವ ಮನವಿ ಪತ್ರವನ್ನು ಸಲ್ಲಿಸಿದರು.

ಮುಂಬೈನಲ್ಲಿ 5 ಸಾವಿರ ಮಂದಿ ವಜಾ

ADVERTISEMENT

ನವದೆಹಲಿ, ಮೇ 13– ಮುಷ್ಕರದಲ್ಲಿ ಪಾಲ್ಗೊಂಡ ಸುಮಾರು ಐದು ಸಾವಿರ ಮಂದಿ ಹಂಗಾಮಿ ನೌಕರರನ್ನು ಸೇವೆಯಿಂದ ವಜಾ ಮಾಡಲು ಮಧ್ಯರೈಲ್ವೆಯು ನಿರ್ಧರಿಸಿದೆ.

ಪಶ್ಚಿಮ ರೈಲ್ವೆಯೂ ಮುಷ್ಕರದಲ್ಲಿ ಪಾಲ್ಗೊಂಡಿರುವ ನೌಕರರನ್ನು ವಜಾ ಮಾಡುವ ನಿರ್ಧಾರ ತಾಳಿದೆ. ಇವೆರಡೂ ಮುಂಬಯಿ ವಿಭಾಗದಲ್ಲಿ ಮುಷ್ಕರದ ತೀವ್ರ ಬಿಸಿ ತಾಕಿದ ರೈಲ್ವೆಗಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.