ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಸೋಮವಾರ, 19-10-1970

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 15:52 IST
Last Updated 18 ಅಕ್ಟೋಬರ್ 2020, 15:52 IST
   

ಹಿಡುವಳಿ ಖೋತಾ ಭೂಮಿ ಕಿತ್ತುಕೊಳ್ಳಲು ಪ್ರಥಮ ಹೆಜ್ಜೆ– ಮಸಾನಿ

ಬೆಂಗಳೂರು, ಅ. 18– ಭೂ ಹಿಡುವಳಿಯ ಪ್ರಮಾಣವನ್ನು ಈಗಿರುವುದಕ್ಕಿಂತ ಕಡಿಮೆ ಮಾಡುವುದು ‘ಭೂಮಿಯನ್ನು ರೈತರಿಂದ ಕಿತ್ತುಕೊಳ್ಳುವುದರತ್ತ ಪ್ರಥಮ ಹೆಜ್ಜೆ’ ಎಂದು ಸ್ವತಂತ್ರ ಪಕ್ಷದ ಅಧ್ಯಕ್ಷ ಶ್ರೀ ಎಂ.ಆರ್. ಮಸಾನಿಯವರು ಇಂದು ಇಲ್ಲಿ ಎಚ್ಚರಿಸಿದರು.

ಹಿಡುವಳಿಯ ಪ್ರಮಾಣವನ್ನು ಕಡಿಮೆ ಮಾಡಿದರೆ ಕೃಷಿ ಉತ್ಪನ್ನ ಕಡಿಮೆಯಾಗಿ ಆಹಾರವಿಲ್ಲದೆ ಜನ ಹಸಿವಿನಿಂದ ನರಳಬೇಕಾದೀತು ಎಂದರು.

ADVERTISEMENT

ರಾಜ್ಯಕ್ಕಿಂತ ಕೇಂದ್ರ ಬಲವಾಗುವುದಕ್ಕೆ ಮಸಾನಿ ವಿರೋಧ

ಬೆಂಗಳೂರು, ಅ. 18– ರಾಜ್ಯಗಳು ದುರ್ಬಲಗೊಂಡು ಕೇಂದ್ರ ಶಕ್ತಿಯುತವಾಗು ವುದನ್ನು ಸ್ವತಂತ್ರ ಪಕ್ಷದ ಅಧ್ಯಕ್ಷ ಶ್ರೀ ಎಂ.ಆರ್. ಮಸಾನಿಯವರು ವಿರೋಧಿಸಿದ್ದಾರೆ.

‘ರಾಜ್ಯಗಳು ಬಲವಾಗಿರದಿದ್ದರೆ ಕೇಂದ್ರ ಸರ್ವಾಧಿಕಾರಿಯಾಗುತ್ತೆ’ ಎಂದು ಹೇಳಿ ‘ಈಗಾಗಲೇ ದೆಹಲಿಯಲ್ಲಿ ಕಂಡು ಬರುತ್ತಿರುವ ಸರ್ವಾಧಿಕಾರ ಪ್ರವೃತ್ತಿ’ ಬಗ್ಗೆ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.