ಯುದ್ಧ ಹೂಡಿದರೆ ಪಾಕ್ ಪರ ಶಕ್ತ ರಾಷ್ಟ್ರಗಳ ಹಸ್ತಕ್ಷೇಪ ಇಲ್ಲ
ನವದೆಹಲಿ, ನ. 26– ಬಾಂಗ್ಲಾ ಬಿಕ್ಕಟ್ಟನ್ನು ತೀವ್ರಗೊಳಿಸಿ ಪಾಕಿಸ್ತಾನವು ಯುದ್ಧ ಆರಂಭಿಸಿದರೆ ಅದರ ಪರವಾಗಿ ವಿಶ್ವದ ಯಾವ ಶಕ್ತಿ ರಾಷ್ಟ್ರವೂ ಸಕ್ರಿಯ ಪಾತ್ರ ವಹಿಸುವುದು ಅಸಂಭವವೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ರಾಜ್ಯಪಾಲರ ಸಮ್ಮೇಳನಕ್ಕೆ ತಿಳಿಸಿದರೆಂದು ಗೊತ್ತಾಗಿದೆ.
ಭಾರತ ತಾನೇ ತಾನಾಗಿ ಹೋರಾಟದಲ್ಲಿ ತೊಡಗುವುದಿಲ್ಲವೆಂದು ಮತ್ತೆ ನುಡಿದ ಇಂದಿರಾ ಅವರು, ಆದರೆ, ರಾಷ್ಟ್ರವು ಯಾವುದೇ ತುರ್ತು ಪರಿಸ್ಥಿತಿಗಾದರೂ
ಸಿದ್ಧವಿರಬೇಕೆಂದು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.