ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಭಾನುವಾರ 08 -11-2-1970

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 19:31 IST
Last Updated 7 ನವೆಂಬರ್ 2020, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸಾಮಾಜಿಕ ನ್ಯಾಯ ಈಡೇರುವ ಆರ್ಥಿಕ ಬೆಳವಣಿಗೆ ಅಗತ್ಯ

ಬೆಳಗಾವಿ, ನ.7– ಸಾಮಾಜಿಕ ನ್ಯಾಯ ಈಡೇರುವ ರೀತಿ ದೇಶದ ಆರ್ಥಿಕ ಬೆಳವಣಿಗೆ ಆಗಬೇಕೆಂದು ರಾಷ್ಟ್ರಪತಿ ವಿ.ವಿ. ಗಿರಿ ಅವರು ಇಂದು ಇಲ್ಲಿ ಒತ್ತಿ ಹೇಳಿದರು.

ಆರ್ಥಿಕ ಬೆಳವಣಿಗೆ ಗುರಿ ಈಡೇರಿಕೆಯ ಒಂದು ಸಾಧನಮಾತ್ರ. ಆದರೆ ಅದೇ ಅಂತಿಮ ಗುರಿಯಲ್ಲ. ದೇಶದಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾದಷ್ಟು ಆಹಾರ, ಕುಡಿಯುವ ನೀರು, ಬಟ್ಟೆ, ವಸತಿ ಮೊದಲಾದ ಕನಿಷ್ಠ ಸೌಲಭ್ಯ ಸಿಗದಿದ್ದರೆ ಭಾರಿ ಕೈಗಾರಿಕೆಗಳು, ಅಣೆಕಟ್ಟುಗಳು ಮತ್ತು ವಿದ್ಯುತ್‌ ಯೋಜನೆಗಳಿಗೆ ಯಾವ ಮಹತ್ವವೂ ಇಲ್ಲ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.