ಇನ್ನು ಸಂಪುಟದ ವಿಸ್ತರಣೆ, ಖಾತೆ ಬದಲಾವಣೆ ಇಲ್ಲ
ಬೆಂಗಳೂರು, ಡಿ. 19– ಬಿಜಾಪುರ ಜಿಲ್ಲೆಯ ಶ್ರೀ ಬಿ.ಎಂ. ಪಾಟೀಲರನ್ನು ಹೊಸದಾಗಿ ಸ್ಟೇಟ್ ಸಚಿವರನ್ನಾಗಿ ನೇಮಿಸಿ, ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ತಮ್ಮ ಮಂತ್ರಿಮಂಡಲವನ್ನು ಇನ್ನು
ವಿಸ್ತರಿಸುವುದಿಲ್ಲ, ಖಾತೆಗಳನ್ನು ಬದಲಾಯಿಸುವುದಿಲ್ಲ ಎಂದು ಇಂದು ಇಲ್ಲಿ ಪ್ರಕಟಿಸಿದರು.
‘ಪ್ರಜಾವಾಣಿ’ಗೆ ಮತ್ತೆ ದ್ವಿತೀಯ ಬಹುಮಾನ
ನವದೆಹಲಿ, ಡಿ. 19– ಅತ್ಯುತ್ತಮ ಮುದ್ರಣ ಮತ್ತು ವಿನ್ಯಾಸಕ್ಕಾಗಿ ನಿಮ್ಮ ನೆಚ್ಚಿನ ‘ಪ್ರಜಾವಾಣಿ’ಗೆ ದ್ವಿತೀಯ ವರ್ಗದ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ದ್ವಿತೀಯ ಬಹುಮಾನ ‘ಪ್ರಜಾವಾಣಿ’ಗೆ ಬಂದಿರುವುದು ಇದು ಎರಡನೇ ಸಲ.
ಮೊದಲು ಐದು ಸಲ ಅರ್ಹತಾಪತ್ರ ದೊರೆತಿರುವುದೂ ಸೇರಿ, ನಿಮ್ಮ ‘ಪ್ರಜಾವಾಣಿ’ ಏಳು ಸಲ ರಾಷ್ಟ್ರಪ್ರಶಸ್ತಿ ಗಳಿಸಿದಂತಾಯ್ತು.
‘ದಿ ಎಕನಾಮಿಕ್ ಟೈಮ್ಸ್’ (ಇಂಗ್ಲಿಷ್) ದಿನ ಪತ್ರಿಕೆಯೂ ದ್ವಿತೀಯ ಬಹುಮಾನ ಪಡೆದಿದೆ.
ದೆಹಲಿಯ ‘ದಿ ಸ್ಟೇಟ್ಸ್ಮನ್’ (ಇಂಗ್ಲೀಷ್) ಮತ್ತು ‘ನವಭಾರತ್ ಟೈಮ್ಸ್’ (ಹಿಂದಿ) ದೈನಿಕಗಳಿಗೆ ಪ್ರಥಮ ಬಹುಮಾನ ದೊರೆತಿದೆ.
ಮಗನ ಮದುವೆಯಲ್ಲಿ ವಿದೇಶೀ ಬಳುವಳಿ ಪಡೆಯಲಿಲ್ಲ: ಇಂದಿರಾ
ನವದೆಹಲಿ, ಡಿ. 19– ತಮ್ಮ ಪುತ್ರ ರಾಜೀವ್ ಮದುವೆಗೆ ಒಂದು ವಾರದ ಮುಂಚೆ ಇಟಲಿ ಅಥವಾ ಇನ್ನಾವುದೇ ಸ್ಥಳದಿಂದ 24 ಬಳುವಳಿ ಪೆಟ್ಟಿಗೆಗಳನ್ನು ಪಡೆಯಲಾಯಿತೆಂಬ ಆಪಾದನೆಯನ್ನು ಇಂದು ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಪಾರ್ಲಿಮೆಂಟಿನಲ್ಲಿ ರಾಜ್ನಾರಾಯಣ್ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ನಿರಾಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.