ನ್ಯಾಯಾಂಗದಲ್ಲಿ ಮತ್ತೆ ಜನತೆಗೆ ವಿಶ್ವಾಸ ಬರುವ ಕ್ರಮಕ್ಕಾಗಿ ಆಗ್ರಹ
ನವದೆಹಲಿ, ಮೇ 13– ಮೂವರು ಅತ್ಯಂತ ಹಿರಿಯ ನ್ಯಾಯಾಧೀಶರ ಸೇವಾ ಹಿರಿತನವನ್ನು ಕಡೆಗಣಿಸಿರುವುದರಿಂದ ನುಚ್ಚುನೂರಾಗಿರುವ ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಅದರ ಉನ್ನತ ಪರಂಪರೆಯಲ್ಲಿ ಜನತೆಗೆ ಮತ್ತೆ ನಂಬಿಕೆ ಬರುವಂತೆ ರಾಷ್ಟ್ರಪತಿ ವಿ.ವಿ. ಗಿರಿಯವರು ಕ್ರಮಕೈಗೊಳ್ಳಬೇಕೆಂದು ಒತ್ತಾಯ ಮಾಡಿ ನಾಲ್ಕು ವಿರೋಧ ಪಕ್ಷಗಳು ಇಂದು ಮನವಿ ಪತ್ರವೊಂದನ್ನು ಸಲ್ಲಿಸಿದವು.
ಕಾನೂನು ಆಯೋಗದ ವರದಿ ಸಂಬಂಧ ಸರ್ಕಾರದ ನಿಲುವು ಸ್ಪಷ್ಟಪಡಿಸುವುದರಲ್ಲಿ ಇನ್ನಷ್ಟು ವಿಳಂಬವಾಗಬಾರದು ಎಂದು ಅವರು ಕೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.