ADVERTISEMENT

50 ವರ್ಷಗಳ ಹಿಂದೆ | ಸೋಮವಾರ, 28–9–1970

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 15:13 IST
Last Updated 27 ಸೆಪ್ಟೆಂಬರ್ 2020, 15:13 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಹಿಡುವಳಿ ಮಿತಿ ಕುರಿತ ಎಲ್ಲ ಸಮಸ್ಯೆಗಳು ಕೇಂದ್ರ ಸಮಿತಿ ವಿಮರ್ಶೆಗೆ

ನವದೆಹಲಿ, ಸೆ. 27– ಜಮೀನು ಹಿಡುವಳಿ ಮಿತಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನೂ ಈಚೆಗೆ ರಚಿಸಲಾದ ಭೂ ಸುಧಾರಣೆ ಕುರಿತ ಕೇಂದ್ರ ಸಮಿತಿ ಪರಿಶೀಲನೆಗೆ ಬಿಡಲು ಮುಖ್ಯಮಂತ್ರಿಗಳ ಸಮ್ಮೇಳನ ಇಂದು ನಿರ್ಧರಿಸಿತು.

ಭೂ ಸುಧಾರಣೆಗಳನ್ನು ಹೆಚ್ಚು ಆಸಕ್ತಿಯಿಂದ ಜಾರಿಗೆ ತರಲು ಹಾಗೂ ಹಿಡುವಳಿ ಮಿತಿ ತಗ್ಗಿಸಲು ಪ್ರಧಾನಿ ಇಂದಿರಾ ಗಾಂಧಿ ಮನವಿಯೊಡನೆ ಆರಂಭವಾದ ಸಮ್ಮೇಳನದಲ್ಲಿ ವಿವಿಧ ವಿಭಿನ್ನ ಅಭಿಪ್ರಾಯಗಳು ವ್ಯಕ್ತಪಟ್ಟವು.

ADVERTISEMENT

ನಗರ– ಮೈಸೂರು ಮಧ್ಯೆ ಶೀಘ್ರ ಸುಖ ಪ್ರಯಾಣ

ಮದ್ರಾಸ್‌, ಸೆ. 27– ಮಧ್ಯೆ ಎಲ್ಲೂ ನಿಲ್ಲದ ಮೈಸೂರು– ಬೆಂಗಳೂರು ಡೀಸೆಲ್ ರೈಲು (ನಾನ್‌ಸ್ಟಾಪ್‌ ಡೀಸೆಲ್‌ ಕಾರ್‌ ಸರ್ವಿಸ್‌) ಸಂಚಾರವನ್ನು ಅಕ್ಟೋಬರ್‌ 1ರಂದು ಬೆಳಿಗ್ಗೆ 9.30ಕ್ಕೆ ಬೆಂಗಳೂರಿನಲ್ಲಿ ರೈಲ್ವೆ ಸಚಿವ ಜಿ.ಎಲ್‌.ನಂದಾ ಅವರು ಉದ್ಘಾಟಿಸುವರು.

ರಾಜ್ಯಪಾಲ ಧರ್ಮವೀರ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರೂ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.