ಪಿವಿಎನ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ನವದೆಹಲಿ, ಸೆ. 26 (ಪಿಟಿಐ, ಯುಎನ್ಐ) – ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ರಾಜಕೀಯ ಜೀವನದಲ್ಲಿ ಇಂದು ತೀವ್ರ ಆಘಾತಕರ ದಿನ. ಲಕ್ಕೂ ಬಾಯಿ ಪಾಠಕ್ ಅವರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅವರ ಅರ್ಜಿ ಇಂದು ತಿರಸ್ಕೃತವಾಯಿತು. ಸೇಂಟ್ ಕೀಟ್ಸ್ ಬ್ಯಾಂಕ್ ಖಾತೆ ಲೆಕ್ಕ ನಕಲು ಹಗರಣದಲ್ಲಿ ಇವರ ಶಾಮೀಲು ಸಾಬೀತು ಮಾಡಿರುವ ಸಿಬಿಐ ಇಂದು ಆರೋಪಪಟ್ಟಿ ಸಲ್ಲಿಸಿದೆ.
ವೈದ್ಯರ ಮೌನ ಮೆರವಣಿಗೆ
ಬೆಂಗಳೂರು, ಸೆ. 26– ತಮ್ಮ ಬೇಡಿಕೆ ಈಡೇರಿ ಕೆಗೆ ಆಗ್ರಹಿಸಿ ಮುಷ್ಕರನಿರತ ಕಿರಿಯ ವೈದ್ಯರು ಇಂದು ಮೌನ ಮೆರವಣಿಗೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.