ADVERTISEMENT

50 ವರ್ಷಗಳ ಹಿಂದೆ ಸೋಮವಾರ 27.9.1997

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 18:34 IST
Last Updated 26 ಸೆಪ್ಟೆಂಬರ್ 2021, 18:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪರಿಮಳ ಮಂಟಪದಲ್ಲಿ ಭಕ್ತಿಯ ಮಹಾಪೂರ

ಬೆಂಗಳೂರು, ಸೆ. 26– ‘ಭಕ್ತಿಯ ತುಂಗಭದ್ರೆಯ ಮಹಾಪೂರದ’ ಪವಿತ್ರತಮ ವಾತಾವರಣ. ‘ಪೂಜ್ಯಾಯ ರಾಘವೇಂದ್ರಾಯ’ ಶ್ಲೋಕದ ನಿನಾದ. ಬೆಳಗಿನಿಂದ ರಾತ್ರಿಯವರೆಗೆ ಭಕ್ತಾದಿಗಳ ಯಾತ್ರಾಸ್ಥಳ– ಕೋಟೆ ಮೈದಾನದ ವಿಶಾಲವಾದ ಪರಿಮಳ ಮಂಟಪ.

ಪಕ್ಕದಲ್ಲಿದ್ದ ಮಂತ್ರಾಲಯ ಪ್ರದರ್ಶನ ನೋಡಲು ಕರಗದ ಕ್ಯೂ.

ADVERTISEMENT

ಜಾತಿಮತ ಭೇದವಿಲ್ಲದೆ ಎಲ್ಲ ವರ್ಗದವರನ್ನೂ ಆಕರ್ಷಿಸಿದ ಶ್ರೀ ರಾಘವೇಂದ್ರ ಸ್ವಾಮಿಗಳ ತ್ರಿಶತಮಾನೋತ್ಸವದ ದ್ವಿತೀಯ ದಿನದ ಕಾರ್ಯಕ್ರಮ ಜನದಟ್ಟಣೆಯ ಯಾತ್ರಾಸ್ಥಳವಾಗಿ ಪರಿಣಮಿಸಿತು. ವಿಶಾಲವಾದ ಪೆಂಡಾಲ್‌ನಲ್ಲಿ ಸ್ಥಳ ಸಿಕ್ಕದೆ ಹೊರಗೆ ನಿಂತವರ ಸಂಖ್ಯೆ ಅಪಾರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.