ADVERTISEMENT

50 ವರ್ಷಗಳ ಹಿಂದೆ| ಸೋಮವಾರ, 19–7–1971

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 19:30 IST
Last Updated 18 ಜುಲೈ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಆಸ್ತಿಗೆ ನೀಡುವ ಪರಿಹಾರಕ್ಕೆ ನ್ಯಾಯಾಲಯದ ವ್ಯಾಪ್ತಿ ಬೇಡ: ಕಾನೂನು ತಜ್ಞರ ಅಭಿಪ್ರಾಯ

ನವದೆಹಲಿ, ಜುಲೈ 18– ಸ್ವಾಧೀನ ಪಡಿಸಿಕೊಳ್ಳುವ ಆಸ್ತಿಗೆ ಪರಿಹಾರದ ಪ್ರಮಾಣ ನಿರ್ಧರಿಸುವ ಅಧಿಕಾರವನ್ನು ಸಂಸ್ತ್ತಿಗೆ ನೀಡುವಂತೆ ಹಾಗೂ ಅಂಥ ಪರಿಹಾರ ಸಾಕೇ ಎಂಬುದನ್ನು ಯಾವ ನ್ಯಾಯಾಲಯದಲ್ಲಿಯೂ ಪ್ರಶ್ನಿಸಲಾಗದಂತೆ ಸಂವಿಧಾನಕ್ಕೆ ತಿದ್ದಪಡಿ ತರಬೇಕೆಂದು ಆಡಳಿತ ಕಾಂಗ್ರೆಸ್ಸಿನ ಸಂಸತ್‌ ಸದಸ್ಯರು ಹಾಗೂ ಕಾನೂನು ತಜ್ಞರನೇಕರು ಇಂದು ಅಪೇಕ್ಷಿಸಿದರು.

ಜನತೆಯ ಅಶೋತ್ತರ ಪೂರೈಸಲು ಸಂಸತ್ತಿನ ಚುನಾಯಿತ ಜನತಾ ಪ್ರತಿನಿಧಿಗಳಿಗೆ ಅಂಥ ಅಧಿಕಾರವಿರಬೇಕು ಎಂದು ಆಡಳಿತ ಕಾಂಗ್ರೆಸ್‌ ಸಂಸತ್‌ ಪಕ್ಷ ಏರ್ಪಡಿಸಿರುವ ‘ನಮ್ಮ ಸಂವಿಧಾನ ಹಾಗೂ ಸಮಾಜ ಸುಧಾರಣೆ’ ವಿಷಯ ಕುರಿತ ವಿಚಾರಗೋಷ್ಠಿಯ 2ನೇ ದಿನವಾದ ಇಂದು ಬಹುತೇಕ ಭಾಷಣಕಾರರು ನುಡಿದರು. ಅವರಲ್ಲಿ ಕೆಲವರು, ಪರಿಹಾರ ನೀಡಿಕೆಯನ್ನೇ ವಿರೋಧಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.