ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಗುರುವಾರ, ಜೂನ್‌ 22, 1972

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 19:30 IST
Last Updated 21 ಜೂನ್ 2022, 19:30 IST
   

ಕಾಳಿ ಜಲ ವಿದ್ಯುತ್‌ ಯೋಜನೆ: ಪೂರ್ಣ ಖರ್ಚು ಕೊಡಲು ಕೇಂದ್ರದ ಸಮ್ಮತಿ

ಬೆಂಗಳೂರು, ಜೂನ್‌ 21–164 ಕೋಟಿರೂ.ಗಳ ವೆಚ್ಚದ ಮೈಸೂರಿನ ಕಾಳಿ ಜಲ ವಿದ್ಯುತ್‌ ಯೋಜನೆಯ ಸಂಪೂರ್ಣ ಖರ್ಚನ್ನು ವಹಿಸಿಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಅರ್ಥಮಂತ್ರಿ ಶ್ರೀ ಎಂ.ವೈ. ಘೋರ್ಪಡೆ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಮತ್ತು ಶ್ರೀ ಘೋರ್ಪಡೆ ಅವರು ಕೇಂದ್ರದ ಅರ್ಥಮಂತ್ರಿ ಮತ್ತು ಯೋಜನಾ ಮಂತ್ರಿಯವರೊಡನೆ ದೆಹಲಿಯಲ್ಲಿ ನಡೆಸಿದ ಮಾತುಕತೆಯ ಕಾಲದಲ್ಲಿ ಈ ತೀರ್ಮಾನಕ್ಕೆ ಬರಲಾಯಿತು ಎಂದು ಅವರು ಬಜೆಟ್‌ ಭಾಷಣದಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.