ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, ನವೆಂಬರ್‌ 16, 1971

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 16:09 IST
Last Updated 15 ನವೆಂಬರ್ 2021, 16:09 IST
   

ಭದ್ರಾವತಿ ಉಕ್ಕು ಕಾರ್ಖಾನೆ ಹಗರಣ ಮತ್ತಷ್ಟು ತನಿಖೆಗೆ ಶಿಫಾರಸು?

ಬೆಂಗಳೂರು, ನ. 15– ಬೆಳಕಿಗೆ ಬಂದಿರುವ ಭದ್ರಾವತಿ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಕೆಲವು ವ್ಯವಹಾರಗಳ ಬಗ್ಗೆ ಮುಂದಿನ ತನಿಖೆ ಅಗತ್ಯವೆಂದು ರಾಜ್ಯದ ಆರ್ಥಿಕ ಸಲಹೆಗಾರರಾದ ಶ್ರೀ ಶಿರಾಳಿ ಅವರು ರಾಜ್ಯಪಾಲರಿಗೆ ಒಪ್ಪಿಸಿರುವ ವರದಿಯಲ್ಲಿ ಶಿಫಾರಸು ಮಾಡಿದ್ದಾರೆಂದು ತಿಳಿದು ಬಂದಿದೆ.

ಕಾರ್ಖಾನೆಯ ಅಕ್ರಮವೆನ್ನಲಾದ ಕೆಲವು ವ್ಯವಹಾರಗಳನ್ನು ‘ಪ್ರಜಾವಾಣಿ’ ಬೆಳಕಿಗೆ ತಂದ ಮೇಲೆ ಅವುಗಳನ್ನು ಪರಿಶೀಲಿಸಿ, ತಮಗೆ ವರದಿ ಸಲ್ಲಿಸಲು ಶ್ರೀ ಶಿರಾಳಿ ಅವರನ್ನು ರಾಜ್ಯಪಾಲರು ನೇಮಿಸಿದ್ದರು.

ADVERTISEMENT

ಗಡಿ ಉಲ್ಲಂಘಿಸುವ ಪಾಕ್ ಕೃತ್ಯಗಳ ವಿರುದ್ಧ ಸೈನ್ಯಕ್ರಮಕ್ಕೆ ಆದೇಶ

ನವದಹೆಲಿ, ನ. 15– ಪಾಕಿಸ್ತಾನದ ಕಡೆ ಯಿಂದ ಅತಿಕ್ರಮಿಸಿ ಬರುವ ವಿಮಾನಗಳನ್ನು ಹೊಡೆದು ಕೆಡವಲು ಮತ್ತು ಭಾರತದ ಗಡಿ ದಾಟಿ ಬರುವ ಸೈನಿಕರನ್ನು ಹಿಂದಕ್ಕೆ ದಬ್ಬು ವಂತೆ ರಕ್ಷಣಾ ಪಡೆಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದು ರಕ್ಷಣಾ ಸಚಿವ ಜಗ ಜೀವನ ರಾಂ ಸಂಸತ್ತಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.