ADVERTISEMENT

50 ವರ್ಷಗಳ ಹಿಂದೆ: ಭಾನುವಾರ 5–3–1972

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 21:45 IST
Last Updated 4 ಮಾರ್ಚ್ 2022, 21:45 IST
   

16 ರಾಜ್ಯಗಳಲ್ಲಿ ಕೆಚ್ಚಿನ ಹೋರಾಟ ಇಂದಿನಿಂದ ಆರಂಭ

ನವದೆಹಲಿ, ಮಾ. 5‍– ರಾಷ್ಟ್ರದ ಇಪ್ಪತ್ತೊಂದು ರಾಜ್ಯಗಳ ಪೈಕಿ ಹದಿನಾರು ರಾಜ್ಯಗಳಲ್ಲಿ ಮತದಾನದ ಮೂಲಕ ಅಧಿಕಾರಗಳಿಸುವುದಕ್ಕಾಗಿ ಒಂದು ವಾರ ಅವಧಿಯ ಕೆಚ್ಚಿನ ಹೋರಾಟವು ಇಂದು ಆರಂಭವಾಗಲಿದೆ.

ಮೈಸೂರು ಮತ್ತು ಗುಜರಾತ್ ರಾಜ್ಯಗಳ ಅನೇಕ ನಗರಗಳಲ್ಲಿ ಇಂದು ಮತದಾನ ನಡೆಯಲಿದ್ದು ಅಲ್ಲಿಯ ಸಂಸ್ಥಾ ಕಾಂಗ್ರೆಸ್‌ಗೆ ಪ್ರತಿಷ್ಠಿತ ಹೋರಾಟವೆನಿಸಿದೆ.

ADVERTISEMENT

ಈಗ ಕಾಂಗ್ರೆಸ್‌ ಸರ್ಕಾರವಿರುವ ಎಲ್ಲಾ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಚುನಾವಣೆ ಆರಂಭದ ಮೊದಲ ದಿನವೇ ಮತದಾನ ನಡೆಯುವುದು.

ಚುನಾವಣಾ ಪ್ರಚಾರ ವೈಖರಿ!

ಬೆಂಗಳೂರು, ಮಾ. 5‍– ಭಾನುವಾರ ಮತದಾನ ಇರುವುದರಿಂದ ಶನಿವಾರ ಬೆಂಗಳೂರು ಪ್ರಚಾರದ ಬಿರುಸು, ಧ್ವನಿವರ್ಧಕಗಳ ಗದ್ದಲದಿಂದ ದೂರವಾಗಿತ್ತು ಆದರೆ ಮನೆಗಳಿಗೆ ಹೋಗಿ ಮತದಾರರನ್ನು ಭೇಟಿ ಮಾಡುವ ಅಭ್ಯರ್ಥಿಗಳ ಪರ ಪ್ರಚಾರಕರ ತಂಡದ ಚಟುವಟಿಕೆ ಅಲ್ಲಲ್ಲಿ ಕಂಡು ಬಂತು. ಅಭ್ಯರ್ಥಿಗಳ ಸಂಕೇತ, ವ್ಯಾನ್‌ಗಳ ಮೇಲೆ ಮೆರೆದಿದ್ದು ಪ್ರಚಾರದ ವೈಶಿಷ್ಟ್ಯ. ಆಳೆತ್ತರದ ಪ್ರಧಾನಿ ಗಾಂಧಿ ಅವರ ಪ್ರತಿಮೆ ಆಡಳಿತ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮತದಾರರ ಮನ ಸೆಳೆಯಲು ಅನುಸರಿಸಿದ ತಂತ್ರ. ಅದೇ ರೀತಿ ಆನೆ, ದೀಪ, ರಾಟೆ ಮೊದಲಾದವೂ ವಾಹನಗಳ ಮೇಲೆ ಮೆರೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.