ADVERTISEMENT

ಅಧಿಕಾರ ದುರುಪಯೋಗ

ಸುದರ್ಶನ ಎಚ್.ಯಡಹಳ್ಳಿ
Published 1 ಮೇ 2014, 19:30 IST
Last Updated 1 ಮೇ 2014, 19:30 IST

ಲೋಕೋಪಯೋಗಿ ಸಚಿವ ಎಚ್. ಸಿ. ಮಹದೇವಪ್ಪ ಅವರು ಸರ್ಕಾರಿ ನಿವಾಸದ  ದೊಡ್ಡಮಟ್ಟದ ದುರಸ್ತಿಗೆ ಮುಕ್ಕಾಲು ಕೋಟಿ ರೂಪಾಯಿ ಹಣ ವೆಚ್ಚ ಮಾಡಲು ಮುಂದಾಗಿದ್ದಾರೆ. ಇದನ್ನು ಸಮರ್ಥಿಸಿದ ಅವರು  ಸರ್ಕಾರಿ ಆಸ್ತಿ ರಕ್ಷಿಸುವುದು ತಮ್ಮ ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ.

ಆದರೆ ಅದೇ ಮನೆಯಲ್ಲಿ ಕಾರ್ಟೂನ್ ಚಿತ್ರಗಳನ್ನು ಅಂಟಿಸಿ­ಕೊಂಡಿದ್ದಾರೆ. ಅವರಿಗೆ ಸರ್ಕಾರಿ ಆಸ್ತಿಗಿಂತ ತಮ್ಮ ಮೊಮ್ಮಕ್ಕಳ ಸಂತೋಷ, ಇಷ್ಟ, ಕಾಳಜಿಯೇ ದೊಡ್ಡದಾಯಿತೇ? ಅವರು ಈ ರೀತಿ ಮಾಡಿ ಸರ್ಕಾರಿ ನಿವಾಸದ ಉಪಯೋಗಕ್ಕಿಂತ ದುರು­ಪ­ಯೋಗ ಮಾಡಿಕೊಂಡಿ­ದ್ದಾರೆ. ಸಚಿವರ ಈ ಕಾರ್ಯಗಳಿಗೆ ಕಡಿವಾಣ ಬೀಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.