‘ಹಿಂದಿನ ಸಿನಿಮಾಗಳು, ಅವುಗಳ ಹಾಡುಗಳು ಎಲ್ಲ ಉತ್ತಮವಾಗಿದ್ದುವು. ಈಗ ಅವನತಿ ಕಾಣುತ್ತಿರುವುದೇಕೆ?’ ಎಂದು ಪ್ರಶ್ನಿಸಿದರೆ, ಸಂಬಂಧಪಟ್ಟವರು ಉತ್ತರಿಸುತ್ತಾರೆ: ‘ಅವನತಿಯೇನಿಲ್ಲ. ಈಗ ಜನ ಬಯಸಿದ್ದನ್ನು ನಾವು ಕೊಡುತ್ತೇವಷ್ಟೆ!’ (ಪ್ರ.ವಾ. ಒಂದು ಸಂದರ್ಶನದಲ್ಲಿ). ಸಾಹಿತ್ಯ ವಿಮರ್ಶೆಯೆಂದರೆ, ‘correction of taste’ (ಅಭಿರುಚಿ ಶುದ್ಧೀಕರಣ) ಎನ್ನುತ್ತಾನೆ, ಟಿ.ಎಸ್. ಎಲಿಯಟ್.
ಎಲ್ಲ ಕ್ಷೇತ್ರಗಳಲ್ಲೂ ಈಗಿನ ಪ್ರವೃತ್ತಿಯೆಂದರೆ, ಅಭಿರುಚಿಯ ‘ಕರೆಕ್ಷನ್’ ಅಲ್ಲ, ‘ಕರಪ್ಷನ್’ (corruption), ಅರ್ಥಾತ್ ಭ್ರಷ್ಟತೆ! ‘ಕಾಲಾಯ ತಸ್ಮೈ ನಮಃ’.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.