‘ಆರೂವರೆ ಕೋಟಿ ಜನರು ಕುಮಾರಸ್ವಾಮಿಗೆ ಬೆಂಬಲ ನೀಡಿಲ್ಲ. 37 ಶಾಸಕರನ್ನು ಇಟ್ಟುಕೊಂಡು ನಾವು ಹೇಗೆ (ಸಾಲಮನ್ನಾ ವಿಚಾರ) ನಿರ್ಧಾರ ಮಾಡಲು ಸಾಧ್ಯ?’ (ಪ್ರ.ವಾ., ಮೇ 29) ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪ್ರಶ್ನಿಸಿದ್ದಾರೆ.
ಕರ್ನಾಟಕದ ಸಮಸ್ತರೂ ಕುಮಾರಸ್ವಾಮಿಗೆ ಬೆಂಬಲ ನೀಡಲು ಹೇಗೆ ಸಾಧ್ಯ? ರಾಜ್ಯದಲ್ಲಿ ಇರುವ ನೋಂದಾಯಿತ ಮತದಾರರ ಸಂಖ್ಯೆ 4.97 ಕೋಟಿ. ಅದರಲ್ಲಿ ಮತದಾನ ಆಗಿದ್ದು ಶೇ 72.13 ಮಾತ್ರ. ಹೀಗಿರುವಾಗ ಆರೂವರೆ ಕೋಟಿ ಜನರ ಬೆಂಬಲ ದೊರೆತರೆ ಮಾತ್ರ ಸಾಲಮನ್ನಾ ಮಾಡುತ್ತೇವೆ ಎಂದರೆ ಹೇಗೆ?
– ರಘುನಾಥರಾವ್ ತಾಪ್ಸೆ, ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.