ಕೇಂದ್ರ ಸರ್ಕಾರ ವಿಐಪಿ ಸಂಸ್ಕೃತಿಯನ್ನು ತೊಡೆಯಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಕಾರುಗಳಲ್ಲಿ ಕೆಂಪು ದೀಪ ಬಳಕೆ ನಿಷೇಧಿಸಿದ ಮಾತ್ರಕ್ಕೆ ಮಹಾಸಾಧನೆ ಆಗುವುದಿಲ್ಲ. ಇದರಿಂದ ವಿಐಪಿ ಸಂಸ್ಕೃತಿ ಅಳಿಯುತ್ತದೆ ಎಂಬುದು ಬರೀ ಭ್ರಮೆ.
ವಿಐಪಿ ಹೆಸರಿನಲ್ಲಿ ಸರ್ಕಾರಗಳು ಕೊಡುವ ಸಕಲ ಸೌಲಭ್ಯಗಳೂ ರದ್ದಾಗಬೇಕು. ಭದ್ರತೆ, ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ, ವೇತನ, ವಸತಿ ಸೌಲಭ್ಯ, ವಿಮಾನ ಪ್ರಯಾಣದಂಥ ಸೌಕರ್ಯಗಳಲ್ಲೂ ಕಡಿತ ಆಗಬೇಕು. ಅಂದರೆ ಮಾತ್ರ ಈ ಸಂಸ್ಕೃತಿಗೆ ಸ್ವಲ್ಪವಾದರೂ ಕಡಿವಾಣ ಬಿದ್ದಂತಾಗುತ್ತದೆ.
-ವಿ.ಜಿ. ಇನಾಮದಾರ, ಸಾರವಾಡ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.