ಒಂದು ಕಾಲದಲ್ಲಿ ಚಿತ್ರದುರ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದಕ್ಷತೆಗೆ ಹೆಸರಾಗಿದ್ದ ಅಲೋಕ್ ಕುಮಾರ್ ಅವರು, ಅಕ್ರಮ ಲಾಟರಿ ದಂಧೆಯ ರೂವಾರಿ ಎನ್ನಲಾದ ಪಾರಿ ರಾಜನ್ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಅಮಾನತುಗೊಂಡಿರುವುದು ಆಶ್ಚರ್ಯಕರ.
ಅಂದು ಅನೇಕ ಗ್ರಾಮಗಳಿಗೆ ಮಾರುವೇಷದಲ್ಲಿ ಹೋಗಿ ಇಸ್ಪೀಟ್ ಆಡುವವರನ್ನು ಹಿಡಿಯುತ್ತಿದ್ದ ಅಲೋಕ್ ಕುಮಾರ್ ಇವರೇನಾ? ಜಿಲ್ಲೆಯಲ್ಲಿ ಸಂಚಲನ ಉಂಟುಮಾಡಿದ್ದ ಈ ಅಧಿಕಾರಿ ಅದು ಹೇಗೆ ಇಂತಹವರ ಸಂಪರ್ಕಕ್ಕೆ ಸಿಲುಕಿದರು?
ಒಂದಂಕಿ ಲಾಟರಿಯ ಹುಚ್ಚು ಅನೇಕ ಗ್ರಾಮ, ನಗರಗಳಿಗೆ ಪಸರಿಸಿದೆ. ಇಂಥ ಅಕ್ರಮದಲ್ಲಿ ತೊಡಗಿದವರನ್ನು ರಕ್ಷಿಸುತ್ತಿರುವ ಯಾರಿಗೇ ಆಗಲಿ ಶಿಕ್ಷೆ ಆಗಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.