ಈ ವರ್ಷ ನಮ್ಮ ರಾಜ್ಯದ ಅರ್ಧದಷ್ಟು ಭಾಗದಲ್ಲಿ ಬರಗಾಲವಿದೆ. ಜನ,ಜಾನುವಾರುಗಳ ಬವಣೆ ಹೇಳತೀರದು. ಬರ ಪೀಡಿತ ಪ್ರದೇಶಗಳ ಜನರಿಗಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ.
ಬರ ನಿರ್ವಹಣೆಯಲ್ಲಿ ಹಲವು ಇಲಾಖೆಗಳ ನೌಕರರು ದುಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ಸಾಮಾನ್ಯ ವರ್ಗಾವಣೆಯನ್ನು ಸರ್ಕಾರ ಕೈಬಿಡಬೇಕು.ಸಾಮಾನ್ಯ ವರ್ಗಾವಣೆಯನ್ನು ಕೈಬಿಟ್ಟರೆ ಅದರಿಂದ ಉಳಿತಾಯವಾಗುವ ಹಣವನ್ನೂ ಸರ್ಕಾರ ಬರಪೀಡಿತ ಜನರಿಗೆ ಇನ್ನೂ ಹೆಚ್ಚಿನ ಸೌಕರ್ಯ ಒದಗಿಸಲು ಬಳಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.