ADVERTISEMENT

ಉದ್ದೇಶ ಏನಿತ್ತು?

ಕೆ.ಜಿ.ಭದ್ರಣ್ಣವರ, ಮುದ್ದೇಬಿಹಾಳ
Published 22 ನವೆಂಬರ್ 2015, 19:30 IST
Last Updated 22 ನವೆಂಬರ್ 2015, 19:30 IST

ಟಿಪ್ಪು ಸುಲ್ತಾನನ ಮರಣಕ್ಕೂ, ಭಾರತ ಸ್ವತಂತ್ರವಾದ ಕಾಲಕ್ಕೂ 148  ವರ್ಷಗಳ ಅಂತರವಿದೆ! ಆಗ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಿಜ ಹೋರಾಟಗಾರರಾದ ಗಾಂಧಿ, ನೆಹರೂ, ತಿಲಕ್, ವಲ್ಲಭಭಾಯಿ ಪಟೇಲ್‌, ಸುಭಾಷ ಚಂದ್ರ ಬೋಸ್‌,  ಭಗತ್‌ ಸಿಂಗ್‌ ಮೊದಲಾದವರು ಟಿಪ್ಪುವಿನ ಮರಣಾನಂತರ ಜನಿಸಿದವರು. ಸ್ವಾತಂತ್ರ್ಯದ ಪರಿಕಲ್ಪನೆ, ಅದರ ಮಹತ್ವದ ಅರಿವನ್ನು ಮೊಟ್ಟ ಮೊದಲು ಮೂಡಿಸಿದವರೇ, ಈ ನಿಜ ನಾಯಕರು.

ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು, ಕೇವಲ ತನ್ನ ಅರಸೊತ್ತಿಗೆಯ ಉಳಿವಿಗಾಗಿ ಎಂಬುದನ್ನು ಇತಿಹಾಸ ಸಾರುತ್ತಿದೆ. ಭಾರತವನ್ನು ಬ್ರಿಟಿಷ್‌ ಆಡಳಿತದಿಂದ ಮುಕ್ತಗೊಳಿಸಿ, ಸ್ವತಂತ್ರ ಹಾಗೂ ಪ್ರಜಾಪ್ರಭುತ್ವ ಮಾದರಿಯ ರಾಷ್ಟ್ರವನ್ನಾಗಿ ಮಾಡಬೇಕೆಂಬ ಉದ್ದೇಶ, ಯುದ್ಧ
ಮಾಡುವಾಗ ಟಿಪ್ಪುವಿನದಾಗಿತ್ತೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.