ADVERTISEMENT

ಉದ್ಯಾನವನ ಶುಚಿಗೊಳಿಸಿ ಹಾಗೂ ಸಿ. ಸಿ. ಕ್ಯಾಮೆರಾ ಅಳವಡಿಸಿ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST

ಬಾಪೂಜಿನಗರ 2ನೇ ಹಂತದಲ್ಲಿರುವ ಸ್ವಾಮಿ ವಿವೇಕಾನಂದ ಉದ್ಯಾನ ಇಲಿ, ಹೆಗ್ಗಣಗಳ ಗೂಡಾಗಿದೆ. ಪ್ಲಾಸ್ಟಿಕ್‌ ಚೀಲ, ಕವರ್‌, ಬಾಟಲಿಗಳು  ಎಲ್ಲೆಡೆ ರಾರಾಜಿಸುತ್ತಿವೆ.ಉದ್ಯಾನದ ಪಕ್ಕದಲ್ಲಿ ಮುನೇಶ್ವರ, ಗಣಪತಿ, ದುರ್ಗಾಪರಮೇಶ್ವರಿ ದೇವಸ್ಥಾನವಿದೆ. ಅಲ್ಲಿ ನಿಲ್ಲಿಸುವ ಕಾರುಗಳ ಗ್ಲಾಸ್‌ ಒಡೆದು, ಟೈರ್‌ ಪಂಕ್ಚರ್‌ ಮಾಡಿ ಕೆಲ ಪುಂಡರು ಸಾರ್ವಜನಿಕರಿಗೆ  ತೊಂದರೆ ಕೊಡುತ್ತಿದ್ದಾರೆ.

4ನೇ  ಮುಖ್ಯರಸ್ತೆಯಲ್ಲಿ ಕಳ್ಳತನಗಳು ಹೆಚ್ಚಾಗಿವೆ. ಆದ್ದರಿಂದ ಉದ್ಯಾನಕ್ಕೆ ಹಾಗೂ ದೇವಸ್ಥಾನಕ್ಕೆ ಸಿ.ಸಿ. ಕ್ಯಾಮೆರಾ ಅಳವಡಿಸಿ ಸಾರ್ವಜನಿಕರು ನೆಮ್ಮದಿಯಿಂದ ಓಡಾಡಲು ಅನುಕೂಲ ಮಾಡಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.