ರಾಜ್ಯದ ಖಜಾನೆ ಇಲಾಖೆಯಲ್ಲಿ ಖಜಾನೆಗಳನ್ನು ಉನ್ನತೀಕರಿಸುವ ಕಾರ್ಯ ನಡೆದಿದೆ. ಒಟ್ಟು 57 ಹೊಸ ಹುದ್ದೆಗಳನ್ನು ಸೃಜಿಸಿ 42 ಖಜಾನೆಗಳನ್ನು ಉನ್ನತೀಕರಿಸಲು ಉದ್ದೇಶಿಸಲಾಗಿದೆ.
ಆಶ್ಚರ್ಯವೆಂದರೆ ದಕ್ಷಿಣ ಕರ್ನಾಟಕದಲ್ಲಿ 34 ಖಜಾನೆಗಳು ಉನ್ನತೀಕರಣ ಪ್ರಕ್ರಿಯೆಗೆ ಒಳಗಾಗಿವೆ. ಹೈದರಾಬಾದ್ ಕರ್ನಾಟಕದಲ್ಲಿ ಐದು ಖಜಾನೆಗಳು ಉನ್ನತೀಕರಣಗೊಳ್ಳುತ್ತಿವೆ. ಉಳಿದಂತೆ ದಾವಣಗೆರೆ, ಹಾವೇರಿ, ಧಾರವಾಡ, ಉತ್ತರ ಕನ್ನಡ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಉಡುಪಿ, ಗದಗ ಇಷ್ಟೂ ಜಿಲ್ಲೆಗಳಲ್ಲಿ ಬರೀ ಮೂರು ಖಜಾನೆಗಳು ಉನ್ನತೀಕರಣವಾಗುತ್ತಿವೆ. ಏಕೆ ಹೀಗೆ?
ಈ ಭಾಗದ ಖಜಾನೆಗಳು ಉನ್ನತೀಕರಣಕ್ಕೆ ಅರ್ಹವಲ್ಲವೇ? ಯಾರಾದರೂ ಇದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆಯೇ? ಕಾಲ ಮಿಂಚಿ ಹೋದ ನಂತರ ಚಿಂತಿಸಿ ಫಲವೇನು? ಇನ್ನುಳಿದ ಖಜಾನೆಗಳಾದ ಶಿರಸಿ, ಹರಪನಹಳ್ಳಿ, ಜಮಖಂಡಿ, ಸುರಪುರ, ಶಹಾಪುರ ಮುಂತಾದವುಗಳು ಉನ್ನತೀಕರಣಕ್ಕೆ ಅರ್ಹವಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.