ಬೆಂಗಳೂರಿನಲ್ಲಿ ಎ.ಟಿ.ಎಂ. ಘಟಕವೊಂದರಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿದ ಮಾತ್ರಕ್ಕೆ ಇಂತಹ ಪ್ರಕರಣ ತಡೆಯಲು ಸಾಧ್ಯವಿಲ್ಲ.
ಈ ಹಲ್ಲೆ ನಡೆದದ್ದು ಜನನಿಬಿಡ ಪ್ರದೇಶದ ಬೆಂಗಳೂರಿನ ಹೃದಯ ಭಾಗದಲ್ಲಿ. ಜ್ಯೋತಿ ಅವರು ಎಟಿಎಂ ಕೇಂದ್ರದ ಒಳಗೆ ಪ್ರವೇಶಿಸಿದಾಕ್ಷಣ ಹಲ್ಲೆ ನಡೆಸಿದವ ಒಳನುಗ್ಗಿ ಷಟರ್ ಎಳೆಯುತ್ತಾನೆ. ಏರಿಸಿದ ಷಟರ್ ಬೇರೆಯವರಿಗೆ ಇಳಿಸಲು ಬಾರದಂತೆ; ಕೆಳಗಡೆ ಯಾವ ರೀತಿ ಲಾಕ್ ಮಾಡುತ್ತಾರೋ ಮೇಲೆಯೂ ಅದೇ ರೀತಿ ಲಾಕ್ ಅಳವಡಿಸಬೇಕು.
ಸಂಬಂಧಪಟ್ಟವರೇ ಕೀಲಿ ತೆಗೆದು ಅದನ್ನು ಇಳಿಸುವಂತಿರಬೇಕು. ಎಟಿಎಂ ಕೊಠಡಿಗಳಿಗೆ ಪಾರದರ್ಶಕ ಗಾಜು ಅಳವಡಿಸಿದ್ದರೆ ಈ ಅವಘಡ ತಪ್ಪಿಸಬಹುದಿತ್ತು.
–ಎಚ್.ಬಿ. ಮೇಟಿ. ಜಂಗಮುರಾಳ, ಮುದ್ದೇಬಿಹಾಳ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.