ADVERTISEMENT

ಎಡೆಸ್ನಾನವೂ ಬೇಡ

ಈ.ಬಸವರಾಜು
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ಯಾರೋ ಊಟ ಮಾಡಿದ ಎಂಜಲು ಎಲೆಗಳ ಮೇಲೆ ಇನ್ನೊಬ್ಬರು ಉರುಳು­ವ ಮಡೆ ಮಡೆ­ಸ್ನಾನದ ಬಗ್ಗೆ ರಾಜ್ಯದ ಎಲ್ಲೆಡೆ ವಿವಿಧ ಸಂಘಟನೆ­ಗಳಿಂದ ವಿರೋಧ ವ್ಯಕ್ತವಾಗಿದೆ.

ಮಡೆ ಮಡೆ ಸ್ನಾನ­ವನ್ನು ಕಟುವಾಗಿ ಟೀಕಿಸದ ಪೇಜಾ­ವರ ಶ್ರೀಗಳು ಈಗ ರಾಜಿ ಸೂತ್ರ­ವೊಂದನ್ನು ಮುಂದಿಟ್ಟಿ­ದ್ದಾರೆ. ಅದೆಂದರೆ ಮಡೆ ಮಡೆ ಸ್ನಾನದ ಬದಲು ಎಡೆಸ್ನಾನ! ಅಂದರೆ ದೇವರ ಎಡೆಯ ಮೇಲೆ ಉರುಳುವುದು. ಸಾಮಾನ್ಯ­ವಾಗಿ ನಮ್ಮ ಮನೆ­ಗಳಲ್ಲಿ ದೇವರಿಗೆ, ಹಿರಿಯರಿಗೆ ಇಟ್ಟ ಎಡೆಯ ಆಹಾ­ರ­ವನ್ನು ಭಕ್ತಿ ಹಾಗೂ ಪ್ರೀತಿ­ಯಿಂದ ಸೇವಿಸು­ತ್ತೇವೆ.

ಅಂಥ ಆಹಾ­ರದ ಮೇಲೆ ಉರುಳುವ ಎಡೆ­ಸ್ನಾನದ ಸಲಹೆ ಮಾಡಿರುವ ಪೇಜಾವರ ಶ್ರೀಗಳ ಸಲಹೆ ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ವಾಸ್ತವವಾಗಿ ಮಡೆಸ್ನಾನಕ್ಕೂ ಎಡೆಸ್ನಾನಕ್ಕೂ ಯಾವುದೇ ವ್ಯತ್ಯಾಸ­ವಿಲ್ಲ. ಹಾಗಾಗಿ ನಮಗೆ ಈ ಎರಡೂ ಸ್ನಾನ ಬೇಡ. ಸರ್ಕಾರ ಈ ಎರಡನ್ನೂ ನಿಷೇಧಿಸ­ಬೇಕು. ಜನರು ಎಚ್ಚೆತ್ತು­ಇವೆರಡರ­ಲ್ಲಿಯೂ ಭಾಗವಹಿಸುವುದನ್ನು ನಿಲ್ಲಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.