ಯಾರೋ ಊಟ ಮಾಡಿದ ಎಂಜಲು ಎಲೆಗಳ ಮೇಲೆ ಇನ್ನೊಬ್ಬರು ಉರುಳುವ ಮಡೆ ಮಡೆಸ್ನಾನದ ಬಗ್ಗೆ ರಾಜ್ಯದ ಎಲ್ಲೆಡೆ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.
ಮಡೆ ಮಡೆ ಸ್ನಾನವನ್ನು ಕಟುವಾಗಿ ಟೀಕಿಸದ ಪೇಜಾವರ ಶ್ರೀಗಳು ಈಗ ರಾಜಿ ಸೂತ್ರವೊಂದನ್ನು ಮುಂದಿಟ್ಟಿದ್ದಾರೆ. ಅದೆಂದರೆ ಮಡೆ ಮಡೆ ಸ್ನಾನದ ಬದಲು ಎಡೆಸ್ನಾನ! ಅಂದರೆ ದೇವರ ಎಡೆಯ ಮೇಲೆ ಉರುಳುವುದು. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ದೇವರಿಗೆ, ಹಿರಿಯರಿಗೆ ಇಟ್ಟ ಎಡೆಯ ಆಹಾರವನ್ನು ಭಕ್ತಿ ಹಾಗೂ ಪ್ರೀತಿಯಿಂದ ಸೇವಿಸುತ್ತೇವೆ.
ಅಂಥ ಆಹಾರದ ಮೇಲೆ ಉರುಳುವ ಎಡೆಸ್ನಾನದ ಸಲಹೆ ಮಾಡಿರುವ ಪೇಜಾವರ ಶ್ರೀಗಳ ಸಲಹೆ ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ವಾಸ್ತವವಾಗಿ ಮಡೆಸ್ನಾನಕ್ಕೂ ಎಡೆಸ್ನಾನಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ ನಮಗೆ ಈ ಎರಡೂ ಸ್ನಾನ ಬೇಡ. ಸರ್ಕಾರ ಈ ಎರಡನ್ನೂ ನಿಷೇಧಿಸಬೇಕು. ಜನರು ಎಚ್ಚೆತ್ತುಇವೆರಡರಲ್ಲಿಯೂ ಭಾಗವಹಿಸುವುದನ್ನು ನಿಲ್ಲಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.