ADVERTISEMENT

ಒಂದು ಘೋರ ಅಪಚಾರ

ಡಾ.ಎಂ.ಚಿದಾನಂದ ಮೂರ್ತಿ, ಬೆಂಗಳೂರು
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

‘ರಾಮನಾಥ’ ಅಂಕಿತದ ವಚನಗಳ ಕರ್ತೃ ದೇವರ ದಾಸಿಮಯ್ಯ ಎಂಬ ವಾದದ ಘೋರ ಅಪ­ಚಾರವನ್ನು ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತೇನೆ.

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಪೊಟ್ಟಲ ಚೆರುವಿನಿಂದ ಆಳು­ತ್ತಿದ್ದ  ಕಲ್ಯಾಣ ಚಾಳುಕ್ಯ ಚಕ್ರವರ್ತಿ ಇಮ್ಮಡಿ ಜಯಸಿಂಹನ (ಕ್ರಿ.ಶ. 1040) ರಾಣಿ ಸುಗ್ಗಲೆಗೆ ಶಿವಭಕ್ತಿಯ ಉಪದೇಶ ಮಾಡಿ­ದ­-ವನು ದೇವರ ದಾಸಿಮಯ್ಯ – ಇವನು ಬಹುಶಃ ಕಾವಿ­ವಸ್ತ್ರದ ಬ್ರಹ್ಮಚಾರಿ.

ಇವನು ಏನು ಬರೆ­ದಿರುವನೋ ತಿಳಿಯದು. ಆದರೆ ‘ರಾಮನಾಥ’ ಅಂಕಿ­ತದ ನೇಕಾರ ವೃತ್ತಿಯ ಜೇಡರ ದಾಸಿ­ಮಯ್ಯ ಕ್ರಿ.ಶ. 1140ರಲ್ಲಿದ್ದವನು. ಅವನು ಆದ್ಯ ವಚನಕಾರ ಮತ್ತು ಅವನ ಪತ್ನಿ ದುಗ್ಗ­ಳೆಯೂ ವಚನಗಾರ್ತಿ. ‘ದೇವರ’ ದಾಸಿ­ಮಯ್ಯ, ‘ಜೇಡರ’ ದಾಸಿಮಯ್ಯ ಇಬ್ಬರೂ ಸ್ಪಷ್ಟವಾಗಿ  ಬೇರೆ ಬೇರೆ ಎಂಬುದನ್ನು ಎಲ್ಲ ವಿದ್ವಾಂ­ಸರೂ ಮಾನ್ಯ ಮಾಡಿದ್ದಾರೆ.

ಈ ಸತ್ಯ ಸಂಗತಿಯನ್ನು  ಕಡೆಗಣಿಸಿ, ದೇವರ ದಾಸಿ­ಮಯ್ಯನೇ ‘ರಾಮನಾಥ’ ಅಂಕಿತದ ವಚನ­ಕಾರ ಎಂದು ಭಾವಿಸುವುದಾದಲ್ಲಿ ಜೇಡರ ದಾಸಿಮಯ್ಯನ ಪತ್ನಿ ಸುಗ್ಗಳೆಯನ್ನು ಬ್ರಹ್ಮಚಾರಿ ದೇವರ ದಾಸಿಮಯ್ಯನಿಗೆ ಅನ್ವಯಿಸಿದಂತಾ­-ಗುತ್ತದೆ.

ಅದೊಂದು ಘೋರ ಐತಿಹಾಸಿಕ, ನೈತಿಕ ಅಪಚಾರ. ಇದನ್ನು ಸರ್ಕಾರ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಗಂಭೀರ­ವಾಗಿ ಲೆಕ್ಕಿಸಿ, ಕನ್ನಡ ವಿ.ವಿಯ ‘ದೇವರ ದಾಸಿ­ಮಯ್ಯ ಪೀಠ’ ಎಂಬ ಹೆಸರನ್ನು ‘ಜೇಡರ ದಾಸಿಮಯ್ಯ ಪೀಠ’ ಎಂದು ಬದಲಾ­ಯಿ­ಸಬೇಕು.ಅಗತ್ಯ ಬಿದ್ದರೆ ಸರ್ಕಾರವು ನಾಡಿನ ಶ್ರೇಷ್ಠ ವಿದ್ವಾಂಸರ ಸಭೆ ಕರೆದು ಮೇಲಿನ ವಿಷಯದ ಬಗ್ಗೆ ಅವರ ಸಲಹೆಯನ್ನು ಪಡೆದು­ಕೊಳ್ಳ­ಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.